ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ಗಡಿಗೆ ಹೊಂದಿಕೊಂಡ ಕರ್ನಾಟಕದ ಗ್ರಾಮಗಳಲ್ಲಿ ಕನ್ನಡ ಭಾಷೆ, ಇನ್ನೂ ಕಲಿಯುವ ಹಂತದಲ್ಲಿಯೇ ಉಳಿದಿರುವುದು ಅಚ್ಚರಿ ಎಂದೆನಿಸಿದರೂ ವಾಸ್ತವ ಸತ್ಯ. ಗಡಿನಾಡು ಕನ್ನಡಿಗರಿಗೆ ಶೈಕ್ಷಣಿಕ, ಔದ್ಯೋಗಿಕ ಸೌಲಭ್ಯ ಸಿಗಲಿಲ್ಲ. ಇದರಿಂದ ಬೇಸತ್ತ ಇಲ್ಲಿನ ಕನ್ನಡಿಗರಲ್ಲಿ ಕೆಲವರು, ಕನ್ನಡ ಸರ್ಕಾರದ ಸ್ಪಂದನೆಗೆ ಕಾಯುವುದು ವ್ಯರ್ಥವೆಂದು ತೆಲುಗು ಇಲ್ಲವೇ ಆಂಗ್ಲ ಮಾಧ್ಯಮದ ಮೊರೆ ಹೋಗಿದ್ದಾರೆ.