ರಾಯಚೂರು: ಕೆನರಾ ಬ್ಯಾಂಕ್ ರಾಯಚೂರು ವಲಯ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಶನಿವಾರ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಕೋವಿಡ್ ಮಹಾಮಾರಿಗೆ ಪತಿಯನ್ನು ಕಳೆದುಕೊಂಡ ಕಡುಬಡತನದ ವಿಧವೆಗೆ ಹಣಕಾಸಿನ ನೆರವು ಒದಗಿಸಲಾಯಿತು. ₹25 ಸಾವಿರ ಮೊತ್ತದ ಚೆಕ್ನ್ನು ಬಡವಿಧವೆ ಪಾರ್ವತಿ ಶೆಟ್ಟಿ ಅವರಿಗೆ ಬ್ಯಾಂಕ್ ಅಧಿಕಾರಿಗಳು ಹಸ್ತಾಂತರಿಸಿದರು.
ಕೆನರಾ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕರಾದ ವಿಪಿನ್ ಕುಮಾರ್ ಸಿಂಗ್ ಮತ್ತು ಶಿವಕುಮಾರ್ ಎಸ್. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು.