ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಡಳಿತವು ಎಲ್ಲ ರೀತಿಯಿಂದಲೂ ವಿಫಲವಾಗಿವೆ. ಇವರಿಬ್ಬರು ರಾಮಾಯಣ ಓದಿಲ್ಲ. ನಾನು ಪ್ರತಿನಿತ್ಯ 10 ನಿಮಿಷ ಓದುತ್ತೇನೆ. ಅದರಲ್ಲಿ ಕೃಷಿಕರಿಗೆ, ಹೈನುಗಾರಿಕೆ ಸೇರಿದಂತೆ ಆಡಳಿತ ಹೇಗೆ ಮಾಡಬೇಕು ಮತ್ತು ಅದರ ಮಹತ್ವವನ್ನು ಬರೆಯಲಾಗಿದೆ’ ಎಂದರು.