ತುರ್ವಿಹಾಳ: ಹೋಬಳಿಯ ಗ್ರಾಮಗಳಾದ ಕಲಮಂಗಿ, ಊಮಲೂಟಿ, ವೀರಾಪೂರ ಸೇರಿ ವಿವಿಧೆಡೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಅವರು ಬುಧವಾರ ಬೆಳೆಹಾನಿ ಹಾಗೂ ಬರ ವಿಕ್ಷಣೆ ನಡೆಸಿದರು.
ನಂತರ ಮಾತನಾಡಿದ ಅವರು, ಸಿಂಧನೂರು ತಾಲ್ಲೂಕಿನ ಹಲವು ಗ್ರಾಮಗಳು ಮಸ್ಕಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಮಳೆಯಿಂದಾಗಿ ಕಡಲೆ ಬಿತ್ತಿದ ಹೊಲಗಳು ಹಾನಿಯಾಗಿವೆ. ತೊಗರಿ, ಜೋಳ ಇತರೆ ಬೆಳೆಗಳು ಮಳೆಯ ಕೊರತೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಧಿಕಾರಿಗಳು ಬೆಳೆಹಾನಿ ವರದಿಯನ್ನು ಸರ್ಕಾರಕ್ಕೆ ನೀಡಿದರೆ ಪರಿಹಾರ ನೀಡುವುದಕ್ಕೆ ಅನುಕೂಲವಾಗುತ್ತದೆ ಎಂದರು.
ಸಿಂಧನೂರು ತಹಶೀಲ್ದಾರ್ ಅರುಣ ದೇಸಾಯಿ, ಕೃಷಿ ಇಲಾಖೆ ಸಹಾಯಕ ನಿರ್ದೆಶಕ ನಜೀರ ಅಹ್ಮದ್, ಕಂದಾಯ ಇಲಾಖೆ ಬೂದೆಪ್ಪ, ತಾಲ್ಲೂಕ ಪಂಚಾಯಿತಿ ಅಧಿಕಾರಿ ಚಂದ್ರಶೇಖರ ಗುಂಜಳ್ಳಿ, ಪಂಚಾಯಿತಿ ಅಧ್ಯಕ್ಷ, ಸದಸ್ಯರು, ಕಾಂಗರೆಸ್ ಮುಖಂಡರು, ರೈತರಾದ ರಾಮಣ್ಣ, ಅಮರೇಶ ಹತ್ತಿಗುಡ್ಡ ಇತರರು ಇದ್ದರು.
ಚಿತ್ರಶೀರ್ಷಿಕೆ: ತುರ್ವಿಹಾಳ ಹೋಬಳಿಯ ಹಲವು ಗ್ರಾಮಗಳಲ್ಲಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಹಾಗೂ ಅಧಿಕಾರಿಗಳಿಂದ ಬೆಳೆ ಪರಿಶೀಲನೆ ನಡೆಯಿತು.