<p><strong>ರಾಯಚೂರು:</strong> ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಏಮ್ಸ್ಗಾಗಿ ನಡೆದ ಹೋರಾಟ ವೇದಿಕೆಯಲ್ಲಿ, ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿಯಿಂದ ಜಿಲ್ಲಾ ಮಟ್ಟದ ಕವಿಗೋಷ್ಠಿ ಸೋಮವಾರ ನಡೆಸಲಾಯಿತು.</p>.<p>ಕವಿಗೋಷ್ಠಿ ಉದ್ಘಾಟಿಸಿದ ಸಾಹಿತಿ ವೀರಹನುಮಾನ ಮಾತನಾಡಿ, ನಿರಂತರ ಹೋರಾಟ ಮಾಡಿದರೂ, ಏಮ್ಸ್ಗಾಗಿ ಸರ್ಕಾರ ಮಾತನಾಡುತ್ತಿಲ್ಲ. ಮೂಕವಾಗಿದೆ ಸರ್ಕಾರ, ರಾಯಚೂರಿನ ಜನ ಭಾವನೆಗಳನ್ನು ಅರ್ಥ ಮಾಡಿಕೊಳ್ಳದ ಹೃದಯ ಹೀನವಾಗಿದೆ ಸರ್ಕಾರ ಎಂದರು. </p>.<p>ವಾಸ್ತವಿಕವಾಗಿ ಕವಿಯಾದವನು, ಸಾಹಿತಿಯಾದವನು, ಸಮಾಜಮುಖಿಯಾಗಿರಬೇಕು. ಜನ ಪರವಾಗಿರಬೇಕು, ವರ್ತಮಾನದ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಹೊಂದಿರಬೇಕು. ಈ ನಾಡಿನಲ್ಲಿ ಅನೇಕ ಚಳವಳಿಗಳು ನಡೆದಿವೆ. ಅದರಲ್ಲಿ ಶರಣ ಚಳವಳಿ, ದಾಸ ಚಳವಳಿ, ಮತ್ತು ದಲಿತ, ಬಂಡಾಯ ಚಳವಳಿಗಳು ನಡೆದಿರುವುದು ಸಾಹಿತ್ಯ ಬರಹದ ಮೂಲಕವೇ ಎಂದು ತಿಳಿಸಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಆಂಜನೇಯ ಜಾಲಿಬೆಂಚಿ ಮಾತನಾಡಿ, ಏಮ್ಸ್ ಗಾಗಿ ನಡೆದ ಈ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಅನೇಕ ಕವಿಗಳು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮುಖ್ಯವಾಗಿ ಕವಿಗಳು ತಮ್ಮ ಗಟ್ಟಿ ನಿಲುವನ್ನು ವ್ಯಕ್ತಪಡಿಸಿದ್ದು ತುಂಬಾ ಸಂತೋಷವಾಗಿದೆ ಎಂದರು. </p>.<p>ಜನಸಂಗ್ರಮ ಪರಿಷತ್ತಿನ ಗೌರವ ಅಧ್ಯಕ್ಷ ಜಾನ ವೆಸ್ಲೀ, ಸಿಂಧನೂರಿನ ರಂಗ ಸಮುದಾಯದ ದೇವೇಂದ್ರ ಗೌಡ, ಡಾ. ಬಸವರಾಜ ಕಳಸ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ಆಂಜನೇಯ ಕಾವಲಿ, ರಾವುತರಾವ್ ಬರೂರ ಮತ್ತಿತರರು ಇದ್ದರು.</p>.<p>ಕವಿಗೊಷ್ಠಿಯಲ್ಲಿ ಎಂ. ಬಿ. ಲಕ್ಷ್ಮಿ ರೆಡ್ಡಿ, ರಾಮಣ್ಣ ಬೋಯರ್ , ಬಷಿರ ಅಹ್ಮದ್ ಹೊಸಮನಿ, ಪಂಪಯ್ಯ ಸ್ವಾಮಿ ಶಾಸ್ತ್ರಿ, ಕೊರೆನಲ, ರೇಖಾ ಪಾಟೀಲ್, ಭಾರತಿ ಕುಲಕರ್ಣಿ, ಖಾನ್ ಸಾಬ್ ಮೊಮಿನ್ , ಮಲ್ಲೇಶ್ ಭೈರವ್ ,ಶರಬಸವ ಗುಡದಿನ್ನಿ, ದೇವೇಂದ್ರ ಕಟ್ಟಿಮನಿ, ಶಿವಮೂರ್ತಿ, ನರಸಪ್ಪ ಗೋನವಾರ್, ಸುಕಲತಾ, ರಾಣಿ ಡೇವಿಡ್, ವೇಣು ಜಾಲಿಬೆಂಚಿ ಸೇರಿದಂತೆ 25ಕ್ಕೂ ಹೆಚ್ಚು ಕವಿಗಳು ಭಾಗವಹಿಸಿದ್ದರು.</p>.<p>ಸುಲೋಚನಾ ಪ್ರಾರ್ಥಿಸಿದರು. ಬಿ. ವಿಜಯ ರಾಜೇಂದ್ರ ನಿರೂಪಿಸಿದರು. ಅಶೋಕ್ ಕುಮಾರ್ ಸಿ. ಕೆ. ಜೈನ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು:</strong> ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಏಮ್ಸ್ಗಾಗಿ ನಡೆದ ಹೋರಾಟ ವೇದಿಕೆಯಲ್ಲಿ, ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿಯಿಂದ ಜಿಲ್ಲಾ ಮಟ್ಟದ ಕವಿಗೋಷ್ಠಿ ಸೋಮವಾರ ನಡೆಸಲಾಯಿತು.</p>.<p>ಕವಿಗೋಷ್ಠಿ ಉದ್ಘಾಟಿಸಿದ ಸಾಹಿತಿ ವೀರಹನುಮಾನ ಮಾತನಾಡಿ, ನಿರಂತರ ಹೋರಾಟ ಮಾಡಿದರೂ, ಏಮ್ಸ್ಗಾಗಿ ಸರ್ಕಾರ ಮಾತನಾಡುತ್ತಿಲ್ಲ. ಮೂಕವಾಗಿದೆ ಸರ್ಕಾರ, ರಾಯಚೂರಿನ ಜನ ಭಾವನೆಗಳನ್ನು ಅರ್ಥ ಮಾಡಿಕೊಳ್ಳದ ಹೃದಯ ಹೀನವಾಗಿದೆ ಸರ್ಕಾರ ಎಂದರು. </p>.<p>ವಾಸ್ತವಿಕವಾಗಿ ಕವಿಯಾದವನು, ಸಾಹಿತಿಯಾದವನು, ಸಮಾಜಮುಖಿಯಾಗಿರಬೇಕು. ಜನ ಪರವಾಗಿರಬೇಕು, ವರ್ತಮಾನದ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಹೊಂದಿರಬೇಕು. ಈ ನಾಡಿನಲ್ಲಿ ಅನೇಕ ಚಳವಳಿಗಳು ನಡೆದಿವೆ. ಅದರಲ್ಲಿ ಶರಣ ಚಳವಳಿ, ದಾಸ ಚಳವಳಿ, ಮತ್ತು ದಲಿತ, ಬಂಡಾಯ ಚಳವಳಿಗಳು ನಡೆದಿರುವುದು ಸಾಹಿತ್ಯ ಬರಹದ ಮೂಲಕವೇ ಎಂದು ತಿಳಿಸಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಆಂಜನೇಯ ಜಾಲಿಬೆಂಚಿ ಮಾತನಾಡಿ, ಏಮ್ಸ್ ಗಾಗಿ ನಡೆದ ಈ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಅನೇಕ ಕವಿಗಳು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮುಖ್ಯವಾಗಿ ಕವಿಗಳು ತಮ್ಮ ಗಟ್ಟಿ ನಿಲುವನ್ನು ವ್ಯಕ್ತಪಡಿಸಿದ್ದು ತುಂಬಾ ಸಂತೋಷವಾಗಿದೆ ಎಂದರು. </p>.<p>ಜನಸಂಗ್ರಮ ಪರಿಷತ್ತಿನ ಗೌರವ ಅಧ್ಯಕ್ಷ ಜಾನ ವೆಸ್ಲೀ, ಸಿಂಧನೂರಿನ ರಂಗ ಸಮುದಾಯದ ದೇವೇಂದ್ರ ಗೌಡ, ಡಾ. ಬಸವರಾಜ ಕಳಸ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ಆಂಜನೇಯ ಕಾವಲಿ, ರಾವುತರಾವ್ ಬರೂರ ಮತ್ತಿತರರು ಇದ್ದರು.</p>.<p>ಕವಿಗೊಷ್ಠಿಯಲ್ಲಿ ಎಂ. ಬಿ. ಲಕ್ಷ್ಮಿ ರೆಡ್ಡಿ, ರಾಮಣ್ಣ ಬೋಯರ್ , ಬಷಿರ ಅಹ್ಮದ್ ಹೊಸಮನಿ, ಪಂಪಯ್ಯ ಸ್ವಾಮಿ ಶಾಸ್ತ್ರಿ, ಕೊರೆನಲ, ರೇಖಾ ಪಾಟೀಲ್, ಭಾರತಿ ಕುಲಕರ್ಣಿ, ಖಾನ್ ಸಾಬ್ ಮೊಮಿನ್ , ಮಲ್ಲೇಶ್ ಭೈರವ್ ,ಶರಬಸವ ಗುಡದಿನ್ನಿ, ದೇವೇಂದ್ರ ಕಟ್ಟಿಮನಿ, ಶಿವಮೂರ್ತಿ, ನರಸಪ್ಪ ಗೋನವಾರ್, ಸುಕಲತಾ, ರಾಣಿ ಡೇವಿಡ್, ವೇಣು ಜಾಲಿಬೆಂಚಿ ಸೇರಿದಂತೆ 25ಕ್ಕೂ ಹೆಚ್ಚು ಕವಿಗಳು ಭಾಗವಹಿಸಿದ್ದರು.</p>.<p>ಸುಲೋಚನಾ ಪ್ರಾರ್ಥಿಸಿದರು. ಬಿ. ವಿಜಯ ರಾಜೇಂದ್ರ ನಿರೂಪಿಸಿದರು. ಅಶೋಕ್ ಕುಮಾರ್ ಸಿ. ಕೆ. ಜೈನ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>