<p>ರಾಯಚೂರು: ‘ಓದುವ ಹವ್ಯಾಸ ಹಾಗೂ ಕಲಿಕಾ ಆಸಕ್ತಿ ಹೆಚ್ಷಿಸುವ ದಿಸೆಯಲ್ಲಿ ಶಾಲೆಗೆ ಮೌಲ್ಯಯುತವಾದ ಪುಸ್ತಕಗಳನ್ನು ಕೊಡಲಾಗಿದೆ. ವಿದ್ಯಾರ್ಥಿಗಳು ಇದರ ಪೂರ್ಣ ಲಾಭ ಪಡೆದುಕೊಳ್ಳಬೇಕು’ ಎಂದು ಇಂಡಿ ವಿಲೇಜ್ ಫೌಂಡೇಶನ್ ವ್ಯವಸ್ಥಾಪಕ ತುಬಾ ಆಫ್ರೀನ್ ಹೇಳಿದರು.</p>.<p>ಇಂಡಿ ವಿಲೇಜ್ ಫೌಂಡೇಶನ್ ವತಿಯಿಂದ ನಗರದ ಸ್ಟೇಷನ್ ಬಜಾರ್ನಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಪುಸ್ತಕಗಳ ಕಿಟ್ ದೇಣಿಗೆ ನೀಡಿ ಅವರು ಮಾತನಾಡಿದರು.</p>.<p>‘ಏಳನೇ ತರಗತಿಗೆ ಅಗತ್ಯವಿರುವ ಇಂಗ್ಲಿಷ್ ಮೂಲಾಕ್ಷರಗಳ ಪುಸ್ತಕ, ಹಿಂದಿ ಪುಸ್ತಕ, ಕನ್ನಡ ವಿಷಯದ ಹಾಡು, ಹಾಸ್ಯ, ರಸಪ್ರಶ್ನೆ, ಕಥೆ ಪುಸ್ತಕಗಳನ್ನು ಒಳಗೊಂಡ 100 ಪುಸ್ತಕಗಳನ್ನು ದೇಣಿಗೆ ರೂಪದಲ್ಲಿ ಕೊಡಲಾಗಿದೆ’ ಎಂದು ತಿಳಿಸಿದರು.</p>.<p>ಶಾಲಾ ಮುಖ್ಯ ಶಿಕ್ಷಕ ರಾಘವೇಂದ್ರ ಮಾತನಾಡಿ, ‘ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ರೂಪದಲ್ಲಿ ಜ್ಞಾನಭಂಡಾರ ನೀಡಿರುವುದು ಶ್ಲಾಘನೀಯ. ಇದರಿಂದ ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲ ಶಿಕ್ಷಕರಿಗೂ ಉಪಯುಕ್ತವಾಗಿದೆ’ ಎಂದರು.</p>.<p>ಗ್ರಂಥಾಲಯದ ಹೊಣೆ ವಹಿಸಿಕೊಂಡಿರುವ ಶಿಕ್ಷಕಿ ವೈಶಾಲಿ ಪಾಟೀಲ, ಪದ್ಮಾವತಿ, ಜ್ಯೋತಿ, ಮನೋಹರಮ್ಮ, ಮುದ್ದನಗೌಡ, ಮುತ್ತಣ್ಣ ದೈಹಿಕ ಶಿಕ್ಷಣ ಶಿಕ್ಷಕಿ ಸೂರ್ಯಮ್ಮ, ಸೂಗರಯ್ಯ, ಶಕುಂತಲಾ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಯಚೂರು: ‘ಓದುವ ಹವ್ಯಾಸ ಹಾಗೂ ಕಲಿಕಾ ಆಸಕ್ತಿ ಹೆಚ್ಷಿಸುವ ದಿಸೆಯಲ್ಲಿ ಶಾಲೆಗೆ ಮೌಲ್ಯಯುತವಾದ ಪುಸ್ತಕಗಳನ್ನು ಕೊಡಲಾಗಿದೆ. ವಿದ್ಯಾರ್ಥಿಗಳು ಇದರ ಪೂರ್ಣ ಲಾಭ ಪಡೆದುಕೊಳ್ಳಬೇಕು’ ಎಂದು ಇಂಡಿ ವಿಲೇಜ್ ಫೌಂಡೇಶನ್ ವ್ಯವಸ್ಥಾಪಕ ತುಬಾ ಆಫ್ರೀನ್ ಹೇಳಿದರು.</p>.<p>ಇಂಡಿ ವಿಲೇಜ್ ಫೌಂಡೇಶನ್ ವತಿಯಿಂದ ನಗರದ ಸ್ಟೇಷನ್ ಬಜಾರ್ನಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಪುಸ್ತಕಗಳ ಕಿಟ್ ದೇಣಿಗೆ ನೀಡಿ ಅವರು ಮಾತನಾಡಿದರು.</p>.<p>‘ಏಳನೇ ತರಗತಿಗೆ ಅಗತ್ಯವಿರುವ ಇಂಗ್ಲಿಷ್ ಮೂಲಾಕ್ಷರಗಳ ಪುಸ್ತಕ, ಹಿಂದಿ ಪುಸ್ತಕ, ಕನ್ನಡ ವಿಷಯದ ಹಾಡು, ಹಾಸ್ಯ, ರಸಪ್ರಶ್ನೆ, ಕಥೆ ಪುಸ್ತಕಗಳನ್ನು ಒಳಗೊಂಡ 100 ಪುಸ್ತಕಗಳನ್ನು ದೇಣಿಗೆ ರೂಪದಲ್ಲಿ ಕೊಡಲಾಗಿದೆ’ ಎಂದು ತಿಳಿಸಿದರು.</p>.<p>ಶಾಲಾ ಮುಖ್ಯ ಶಿಕ್ಷಕ ರಾಘವೇಂದ್ರ ಮಾತನಾಡಿ, ‘ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ರೂಪದಲ್ಲಿ ಜ್ಞಾನಭಂಡಾರ ನೀಡಿರುವುದು ಶ್ಲಾಘನೀಯ. ಇದರಿಂದ ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲ ಶಿಕ್ಷಕರಿಗೂ ಉಪಯುಕ್ತವಾಗಿದೆ’ ಎಂದರು.</p>.<p>ಗ್ರಂಥಾಲಯದ ಹೊಣೆ ವಹಿಸಿಕೊಂಡಿರುವ ಶಿಕ್ಷಕಿ ವೈಶಾಲಿ ಪಾಟೀಲ, ಪದ್ಮಾವತಿ, ಜ್ಯೋತಿ, ಮನೋಹರಮ್ಮ, ಮುದ್ದನಗೌಡ, ಮುತ್ತಣ್ಣ ದೈಹಿಕ ಶಿಕ್ಷಣ ಶಿಕ್ಷಕಿ ಸೂರ್ಯಮ್ಮ, ಸೂಗರಯ್ಯ, ಶಕುಂತಲಾ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>