ಹಟ್ಟಿಚಿನ್ನದಗಣಿ: ಬಿಜೆಪಿ ಅಭ್ಯರ್ಥಿ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಪಟ್ಟಣದ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಶನಿವಾರ ವಿಜಯೋತ್ಸವ ಆಚರಿಸಿದರು.
ಪಟಾಕಿಗಳನ್ನು ಸಿಡಿಸಿ, ನಂತರ ಬೈಕ್ ರ್ಯಾಲಿ ನಡೆಸಿ ಸಂಭ್ರಮಿಸಿದರು.
ಮುಖಂಡರಾದ ಗುಂಡಪ್ಪಗೌಡ ಪೊಲೀಸ್ ಪಾಟೀಲ್, ಎನ್.ಸ್ವಾಮಿ ನಾಯಿಕೊಡಿ ಅವರು ಮಾತನಾಡಿ, ಮತದಾರರಿಗೆ ಅಭಿನಂದನೆ ಸಲ್ಲಿಸಿ, ಚುನಾವಣೆ ವೇಳೆಯಲ್ಲಿ ನೀಡಿದ ಭರವಸೆಗಳನ್ನು ಶಾಸಕ ಮಾನಪ್ಪ ವಜ್ಜಲ್ ಈಡೇರಿಸುವರು ಎಂದರು.
ಮುಖಂಡರಾದ ಶಿವಪುತ್ರಪ್ಪ, ವಿಜಯಕುಮಾರ ಸಜ್ಜನ್, ಶಿವಪುತ್ರಪ್ಪ ಅಳ್ಳಳ್ಳಿ, ಅರುಣ ಕುಮಾರ, ಕಿಚ್ಚ ರಾಮು, ನಿಂಗಪ್ಪ ಕುಪ್ಪಿಗುಡ್ಡ, ಅಮರಯ್ಯ ಸ್ವಾಮಿ, ಚಂದ್ರೇಗೌಡ ಇತರರು ಇದ್ದರು.
ಹಟ್ಟಿಚಿನ್ನದಗಣಿ ಪಟ್ಟಣದ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಪಕ್ಷದ ಅಭ್ಯಥರ್ಿ ಮಾನಪ್ಪ.ಡಿವಜ್ಜಲ್ ಚುನಾವಣೆಯಲ್ಲಿ ಜಯಗಳಿಸಿದ ಸುದ್ದಿ ತಿಳಿಯುತ್ತಿದ್ದಂತೆ ವಿಜಯೋತ್ಸವ ಆಚರಿಸಿದರು.