<p><strong>ಕವಿತಾಳ</strong>: ‘ಆರೋಗ್ಯ ಉಚಿತ ತಪಾಸಣೆಯ ಜೊತೆಗೆ ಕನ್ನಡಕಗಳನ್ನೂ ಉಚಿತವಾಗಿ ವಿತರಣೆ ಮಾಡುತ್ತಿರುವುದು ಶ್ಲಾಘನೀಯ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಆದನಗೌಡ ಪಾಟೀಲ ಹೇಳಿದರು.</p>.<p>ಎಸ್ಎಂಎಫ್ಜಿ ಗ್ರಾಮ ಶಕ್ತಿ ಮತ್ತು ಹೆಲ್ಪೇಜ್ ಇಂಡಿಯಾ ಸಂಸ್ಥೆ ವತಿಯಿಂದ ಸಮೀಪದ ವಟಗಲ್ ಗ್ರಾಮದ ಶಾರದಾ ಪಬ್ಲಿಕ್ ಸ್ಕೂಲ್ನಲ್ಲಿ ಸೋಮವಾರ ನಡೆದ ಕನ್ನಡಕ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ವಟಗಲ್ ಗ್ರಾಮದ ಶಿವಶಂಕ್ರಮ್ಮ ಆದನಗೌಡ ಪೊಲೀಸ್ ಪಾಟೀಲ, ಅಮರಮ್ಮ ಚಂದ್ರಾಯಗೌಡ ಮತ್ತು ಸಿದ್ದಲಿಂಗಮ್ಮ ಮಲ್ಲಿಕಾರ್ಜುನಗೌಡ ಅವರ ಸ್ಮರಣಾರ್ಥ ಈಚೆಗೆ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ ನೇತ್ರ ತಪಾಸಣೆ ಮಾಡಿಸಿಕೊಂಡಿದ್ದ 93 ಜನರಿಗೆ ಕನ್ನಡಕಗಳನ್ನು ಉಚಿತವಾಗಿ ವಿತರಣೆ ಮಾಡಲಾಗಿದೆ’ ಎಂದು ಹೇಳಿದರು.</p>.<p>ಹೆಲ್ಪೇಜ್ ಇಂಡಿಯಾ ಸಂಸ್ಥೆಯ ಮುಖ್ಯಸ್ಥ ಹನುಮಂತಪ್ಪ, ಆಡಳಿತಾಧಿಕಾರಿ ಪವಿತ್ರಾ, ಶಾರದಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಸ್ವಾಮಿ, ಪ್ರಾಚಾರ್ಯೆ ಮಂಜುಳಾ ಎಸ್.ಮಲಕರೆಡ್ಡಿ, ಶಿಕ್ಷಕಿಯರಾದ ಫಾತಿಮಾ ಬೇಗಂ, ಪ್ರಿಯಾಂಕ ಪಾಟೀಲ ಹಾಗೂ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕವಿತಾಳ</strong>: ‘ಆರೋಗ್ಯ ಉಚಿತ ತಪಾಸಣೆಯ ಜೊತೆಗೆ ಕನ್ನಡಕಗಳನ್ನೂ ಉಚಿತವಾಗಿ ವಿತರಣೆ ಮಾಡುತ್ತಿರುವುದು ಶ್ಲಾಘನೀಯ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಆದನಗೌಡ ಪಾಟೀಲ ಹೇಳಿದರು.</p>.<p>ಎಸ್ಎಂಎಫ್ಜಿ ಗ್ರಾಮ ಶಕ್ತಿ ಮತ್ತು ಹೆಲ್ಪೇಜ್ ಇಂಡಿಯಾ ಸಂಸ್ಥೆ ವತಿಯಿಂದ ಸಮೀಪದ ವಟಗಲ್ ಗ್ರಾಮದ ಶಾರದಾ ಪಬ್ಲಿಕ್ ಸ್ಕೂಲ್ನಲ್ಲಿ ಸೋಮವಾರ ನಡೆದ ಕನ್ನಡಕ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ವಟಗಲ್ ಗ್ರಾಮದ ಶಿವಶಂಕ್ರಮ್ಮ ಆದನಗೌಡ ಪೊಲೀಸ್ ಪಾಟೀಲ, ಅಮರಮ್ಮ ಚಂದ್ರಾಯಗೌಡ ಮತ್ತು ಸಿದ್ದಲಿಂಗಮ್ಮ ಮಲ್ಲಿಕಾರ್ಜುನಗೌಡ ಅವರ ಸ್ಮರಣಾರ್ಥ ಈಚೆಗೆ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ ನೇತ್ರ ತಪಾಸಣೆ ಮಾಡಿಸಿಕೊಂಡಿದ್ದ 93 ಜನರಿಗೆ ಕನ್ನಡಕಗಳನ್ನು ಉಚಿತವಾಗಿ ವಿತರಣೆ ಮಾಡಲಾಗಿದೆ’ ಎಂದು ಹೇಳಿದರು.</p>.<p>ಹೆಲ್ಪೇಜ್ ಇಂಡಿಯಾ ಸಂಸ್ಥೆಯ ಮುಖ್ಯಸ್ಥ ಹನುಮಂತಪ್ಪ, ಆಡಳಿತಾಧಿಕಾರಿ ಪವಿತ್ರಾ, ಶಾರದಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಸ್ವಾಮಿ, ಪ್ರಾಚಾರ್ಯೆ ಮಂಜುಳಾ ಎಸ್.ಮಲಕರೆಡ್ಡಿ, ಶಿಕ್ಷಕಿಯರಾದ ಫಾತಿಮಾ ಬೇಗಂ, ಪ್ರಿಯಾಂಕ ಪಾಟೀಲ ಹಾಗೂ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>