<p><strong>ರಾಯಚೂರು: </strong>ಜಾತಿ ಜನಗಣತಿ ವರದಿ ಪ್ರಕಟಿಸುವಂತೆ ಆಗ್ರಹಿಸಿ ಶೀಘ್ರವೇ ವಿಧಾನಸೌಧ ಚಲೋ ಪ್ರತಿಭಟನೆಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ಮುಖಂಡ ಎಚ್.ಎಂ.ರೇವಣ್ಣ ಹೇಳಿದರು.</p>.<p>ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಜನಗಣತಿ ಮೊದಲಿಗೆ ಬ್ರಿಟೀಷರ ಅವಧಿಯಲ್ಲಿ ಕೈಗೊಳ್ಳಲಾಗಿತ್ತು. 1931ರಲ್ಲಿ ನಂತರ ಪ್ರಧಾನಿ ಪಿ.ವಿ. ನರಸಿಂಹರಾವ್ ಇದೇ ಮಾದರಿಯಲ್ಲಿ ಜನಗಣತಿ ಮಂಡಲ ಆಯೋಗ ಅನುಷ್ಠಾನನಕ್ಕೆ ಮುಂದಾಗಿದ್ದರು. ಸಿದ್ದರಾಮಯ್ಯ ಸರ್ಕಾರ ಜಾತಿ ಜನಗಣತಿ ಪ್ರಕ್ರಿಯೆ ಪೂರ್ಣಗೊಳಿಸಿದ್ದರು. ₹172 ಕೋಟಿ ವೆಚ್ಚದಲ್ಲಿ 1.53 ಶಿಕ್ಷಕರ ಸಮೀಕ್ಷೆ ನಿರ್ವಹಿಸಿದ್ದಾರೆ. ರಾಜ್ಯದ ಜಾತಿ ಗಣತಿ ಸಂಪೂರ್ಣ ವರದಿ ಸಂಗ್ರಹಿಸಲಾಗಿದೆ ಎಂದರು.</p>.<p>ವರದಿ ಪ್ರಕಟಿಸುವಂತೆ ಕುಮಾರಸ್ವಾಮಿ ಅವರ ಆಡಳಿತಾವಧಿಯಲ್ಲಿ ಕಾಗೋಡು ತಿಮ್ಮಪ್ಪ ಅವರ ನೇತೃತ್ವದಲ್ಲಿ ಮನವಿ ಮಾಡಲಾಗಿತ್ತು. ಕುರುಬ ಸಮಾಜಕ್ಕಾಗಿ ವರದಿ ಬರೆಸಿದ್ದಾರೆ ಎಂದು ಹೇಳಿಕೆ ನೀಡಿ ಜಾರಿಕೊಂಡಿದ್ದರು ಎಂದು ಆರೋಪಿಸಿದರು.</p>.<p>ಬಿಜೆಪಿ ಸರ್ಕಾರ ಜಾತಿ ಜನಗಣತಿ ವರದಿ ಪ್ರಕಟಿಸಲು ಸಬೂಬು ಹೇಳುತ್ತಿದೆ. ಕೇಂದ್ರ ಸರ್ಕಾರ ಮುಂದುವರೆದ ಸಮಾಜಗಳಿಗೆ ಆರ್ಥಿಕ ಆಧಾರದ ಮೇಲೆ ಶೇ 10 ಮೀಸಲಾತಿ ರಾಜ್ಯದಲ್ಲಿ ಹಿಂದುಳಿದ ಸಮಾಜಗಳಿಗೆ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.</p>.<p>ಸಮಾಜದ ಮುಖಂಡ ಸಿದ್ದಪ್ಪ ಭಂಡಾರಿ, ಡಾ.ನಾಗವೇಣಿ, ಅಯ್ಯಣ್ಣ ಪತ್ರಿಕಾಗೋಷ್ಠಿಯಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು: </strong>ಜಾತಿ ಜನಗಣತಿ ವರದಿ ಪ್ರಕಟಿಸುವಂತೆ ಆಗ್ರಹಿಸಿ ಶೀಘ್ರವೇ ವಿಧಾನಸೌಧ ಚಲೋ ಪ್ರತಿಭಟನೆಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ಮುಖಂಡ ಎಚ್.ಎಂ.ರೇವಣ್ಣ ಹೇಳಿದರು.</p>.<p>ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಜನಗಣತಿ ಮೊದಲಿಗೆ ಬ್ರಿಟೀಷರ ಅವಧಿಯಲ್ಲಿ ಕೈಗೊಳ್ಳಲಾಗಿತ್ತು. 1931ರಲ್ಲಿ ನಂತರ ಪ್ರಧಾನಿ ಪಿ.ವಿ. ನರಸಿಂಹರಾವ್ ಇದೇ ಮಾದರಿಯಲ್ಲಿ ಜನಗಣತಿ ಮಂಡಲ ಆಯೋಗ ಅನುಷ್ಠಾನನಕ್ಕೆ ಮುಂದಾಗಿದ್ದರು. ಸಿದ್ದರಾಮಯ್ಯ ಸರ್ಕಾರ ಜಾತಿ ಜನಗಣತಿ ಪ್ರಕ್ರಿಯೆ ಪೂರ್ಣಗೊಳಿಸಿದ್ದರು. ₹172 ಕೋಟಿ ವೆಚ್ಚದಲ್ಲಿ 1.53 ಶಿಕ್ಷಕರ ಸಮೀಕ್ಷೆ ನಿರ್ವಹಿಸಿದ್ದಾರೆ. ರಾಜ್ಯದ ಜಾತಿ ಗಣತಿ ಸಂಪೂರ್ಣ ವರದಿ ಸಂಗ್ರಹಿಸಲಾಗಿದೆ ಎಂದರು.</p>.<p>ವರದಿ ಪ್ರಕಟಿಸುವಂತೆ ಕುಮಾರಸ್ವಾಮಿ ಅವರ ಆಡಳಿತಾವಧಿಯಲ್ಲಿ ಕಾಗೋಡು ತಿಮ್ಮಪ್ಪ ಅವರ ನೇತೃತ್ವದಲ್ಲಿ ಮನವಿ ಮಾಡಲಾಗಿತ್ತು. ಕುರುಬ ಸಮಾಜಕ್ಕಾಗಿ ವರದಿ ಬರೆಸಿದ್ದಾರೆ ಎಂದು ಹೇಳಿಕೆ ನೀಡಿ ಜಾರಿಕೊಂಡಿದ್ದರು ಎಂದು ಆರೋಪಿಸಿದರು.</p>.<p>ಬಿಜೆಪಿ ಸರ್ಕಾರ ಜಾತಿ ಜನಗಣತಿ ವರದಿ ಪ್ರಕಟಿಸಲು ಸಬೂಬು ಹೇಳುತ್ತಿದೆ. ಕೇಂದ್ರ ಸರ್ಕಾರ ಮುಂದುವರೆದ ಸಮಾಜಗಳಿಗೆ ಆರ್ಥಿಕ ಆಧಾರದ ಮೇಲೆ ಶೇ 10 ಮೀಸಲಾತಿ ರಾಜ್ಯದಲ್ಲಿ ಹಿಂದುಳಿದ ಸಮಾಜಗಳಿಗೆ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.</p>.<p>ಸಮಾಜದ ಮುಖಂಡ ಸಿದ್ದಪ್ಪ ಭಂಡಾರಿ, ಡಾ.ನಾಗವೇಣಿ, ಅಯ್ಯಣ್ಣ ಪತ್ರಿಕಾಗೋಷ್ಠಿಯಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>