<p><strong>ಜಾಲಹಳ್ಳಿ</strong>: ಪಟ್ಟಣ ಹೊರವಲಯದ ಕಲ್ಮಲಾ-ತಿಂಥಣಿ ಬ್ರಿಜ್ ಹೆದ್ದಾರಿ ಪಕ್ಕದಲ್ಲಿ ಎಸೆಯಲಾಗಿದ್ದ ತ್ಯಾಜ್ಯವನ್ನು ಗ್ರಾಮ ಪಂಚಾಯಿತಿಯವರು ವಿಲೇವಾರಿ ಮಾಡಿದರು.</p>.<p>ಈ ಕುರಿತು ‘ಪ್ರಜಾವಾಣಿಯ’ ಅಕ್ಟೋಬರ್ 31ರ ಸಂಚಿಕೆಯಲ್ಲಿ ‘ಆಗದ ಕಸ ವಿಲೇವಾರಿ: ಜನತೆಗೆ ತೊಂದರೆ’ ಶೀರ್ಷಿಕೆ ಅಡಿ ವರದಿ ಪ್ರಕಟವಾಗಿತ್ತು.</p>.<p>ವರದಿಯಿಂದ ಎಚ್ಚೆತ್ತ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಶನಿವಾರ ಬೆಳಿಗ್ಗೆಯೇ ರಸ್ತೆ ಪಕ್ಕದಲ್ಲಿ ಎಸೆದ ತ್ಯಾಜ್ಯವನ್ನು ಜೆಸಿಬಿ ಯಂತ್ರದ ಸಹಾಯದಿಂದ ಟ್ರ್ಯಾಕ್ಟರ್ಗೆ ತುಂಬಿ ಬೇರೆ ಕಡೆ ಸಾಗಿಸಿತು.</p>.<p>ಪಿಡಿಒ ನರಸಪ್ಪ ಮಾತನಾಡಿ,‘ಅಂಗಡಿ, ಹೋಟೆಲ್, ಖಾನಾವಳಿಗಳ ಮಾಲೀಕರಿಗೆ ನೋಟಿಸ್ ನೀಡಲಾ ಗುವುದು. ಕಸ ಎಸೆಯದೇ ವಿಲೇವಾರಿ ವಾಹನಕ್ಕೆ ನೀಡಬೇಕು. ಒಂದು ವೇಳೆ ಕಸ ಎಸೆದರೆ ದಂಡ ವಿಧಿಸ ಲಾಗುವುದು’ ಎಂದರು. </p>.<p>ಗ್ರಾ.ಪಂ ಲೆಕ್ಕಧಿಕಾರಿ ಅಯ್ಯಪ್ಪ, ಯಂಕೋಬ ನಾಯಕ ತೋಟದ್, ಗ್ರಾ.ಪಂ ಉಪಾಧ್ಯಕ್ಷ ಈರಪ್ಪ ನಾಯಕ, ಸದಸ್ಯರಾದ ಶಿವಪ್ಪ ನಾಯಕ ಗಾಂಜಿ, ಮಕ್ತೂಮ್ ಬಾಷಾ ಪಾರಸಿ, ಅಬ್ದುಲ್ ರಹಿಮಾನ್ ಖರೇಷಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಾಲಹಳ್ಳಿ</strong>: ಪಟ್ಟಣ ಹೊರವಲಯದ ಕಲ್ಮಲಾ-ತಿಂಥಣಿ ಬ್ರಿಜ್ ಹೆದ್ದಾರಿ ಪಕ್ಕದಲ್ಲಿ ಎಸೆಯಲಾಗಿದ್ದ ತ್ಯಾಜ್ಯವನ್ನು ಗ್ರಾಮ ಪಂಚಾಯಿತಿಯವರು ವಿಲೇವಾರಿ ಮಾಡಿದರು.</p>.<p>ಈ ಕುರಿತು ‘ಪ್ರಜಾವಾಣಿಯ’ ಅಕ್ಟೋಬರ್ 31ರ ಸಂಚಿಕೆಯಲ್ಲಿ ‘ಆಗದ ಕಸ ವಿಲೇವಾರಿ: ಜನತೆಗೆ ತೊಂದರೆ’ ಶೀರ್ಷಿಕೆ ಅಡಿ ವರದಿ ಪ್ರಕಟವಾಗಿತ್ತು.</p>.<p>ವರದಿಯಿಂದ ಎಚ್ಚೆತ್ತ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಶನಿವಾರ ಬೆಳಿಗ್ಗೆಯೇ ರಸ್ತೆ ಪಕ್ಕದಲ್ಲಿ ಎಸೆದ ತ್ಯಾಜ್ಯವನ್ನು ಜೆಸಿಬಿ ಯಂತ್ರದ ಸಹಾಯದಿಂದ ಟ್ರ್ಯಾಕ್ಟರ್ಗೆ ತುಂಬಿ ಬೇರೆ ಕಡೆ ಸಾಗಿಸಿತು.</p>.<p>ಪಿಡಿಒ ನರಸಪ್ಪ ಮಾತನಾಡಿ,‘ಅಂಗಡಿ, ಹೋಟೆಲ್, ಖಾನಾವಳಿಗಳ ಮಾಲೀಕರಿಗೆ ನೋಟಿಸ್ ನೀಡಲಾ ಗುವುದು. ಕಸ ಎಸೆಯದೇ ವಿಲೇವಾರಿ ವಾಹನಕ್ಕೆ ನೀಡಬೇಕು. ಒಂದು ವೇಳೆ ಕಸ ಎಸೆದರೆ ದಂಡ ವಿಧಿಸ ಲಾಗುವುದು’ ಎಂದರು. </p>.<p>ಗ್ರಾ.ಪಂ ಲೆಕ್ಕಧಿಕಾರಿ ಅಯ್ಯಪ್ಪ, ಯಂಕೋಬ ನಾಯಕ ತೋಟದ್, ಗ್ರಾ.ಪಂ ಉಪಾಧ್ಯಕ್ಷ ಈರಪ್ಪ ನಾಯಕ, ಸದಸ್ಯರಾದ ಶಿವಪ್ಪ ನಾಯಕ ಗಾಂಜಿ, ಮಕ್ತೂಮ್ ಬಾಷಾ ಪಾರಸಿ, ಅಬ್ದುಲ್ ರಹಿಮಾನ್ ಖರೇಷಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>