ಮುಖ್ಯವಾಗಿ ಗ್ರಾಮೀಣ ಭಾಗಗಳಲ್ಲಿ ಜನರು, ಜಾನುವಾರು ಸಂಕಷ್ಟ ಅನುಭವಿಸುತ್ತಿದ್ದಾರೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿರುವುದರಿಂದ ಬಹಳಷ್ಟು ಕಡೆಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ರಾಯಚೂರು ನಗರದ ಸಿಯಾತಾಲಾಬ್, ಸುಖಾಣಿ ಕಾಲೋನಿ, ಜಹೀರಾಬಾದ್, ಎಲ್ಬಿಎಸ್ ನಗರದ ಟೀಚರ್ ಕಾಲೋನಿ ಸೇರಿ ತಗ್ಗು ಪ್ರದೇಶದಲ್ಲಿರುವ 20 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. ಜನರು ಜಾಗರಣೆ ಮಾಡಿದ್ದು, ನೀರೆತ್ತುವ ಪಂಪ್ನಿಂದ ಮನೆಗಳನ್ನು ಸ್ವಚ್ಛ ಮಾಡಿಕೊಳ್ಳುತ್ತಿರುವುದು ಬುಧವಾರ ಕಂತುಬಂತು. ಕೆಇಬಿ ಕಾಲೋನಿಯಲ್ಲಿ ದೊಡ್ಡ ನೀಲಗಿರಿ ಮರವೊಂದು ಉರುಳಿದೆ. ಮನೆಗಳಿಗೆ ಹೊಂದಿಕೊಂಡು ಬಿದ್ದಿರುವುದರಿಂದ ಯಾವುದೇ ಜೀವ ಹಾನಿಯಾಗಿಲ್ಲ.