ಶಾಲೆಯಲ್ಲಿರುವ ಎಲ್ಲಾ ಕೊಠಡಿಗಳು ಶಿಥಿಲಾವಸ್ಥೆ ತಲುಪಿದ್ದು, ಮೇಲ್ಚಾವಣಿಯ ಕಾಂಕ್ರಿಟ್ ಎಲ್ಲಂದರಲ್ಲಿ ಕಿತ್ತುಹೋಗಿದೆ. ಇದರಿಂದ ಮಕ್ಕಳು ಶಿಕ್ಷಣ ಕಲಿಕೆಯತ್ತ ಗಮನಹರಿಸದೇ ಚಾವಣೆ ಯಾವಾಗ ನಮ್ಮ ಮೇಲೆ ಬೀಳುತ್ತದೆಯೇ ಎಂಬ ಭಯದಲ್ಲಿದ್ದಾರೆ. ಕೆಲವು ಕೊಠಡಿಗಳು ಬಿರುಕು ಬಿಟ್ಟಿದ್ದು, ಮುಂಭಾಗದಲ್ಲಿ ಹಾಸಿರುವ ಬಂಡೆಗಳು ಕಿತ್ತುಹೋಗಿವೆ.