<p><strong>ರಾಯಚೂರು: </strong>ಕೇಂದ್ರ ಕಾರ್ಮಿಕ ಸಂಘಟನೆಗಳ ಕರೆಯ ಮೇರೆಗೆ ಅಖಿಲ ಭಾರತ ವಿಮಾ ನೌಕರರ ಸಂಘದ ಸದಸ್ಯರುವಿಭಾಗೀಯ ಕಚೇರಿ ಎದುರುಬುಧವಾರ ಒಂದು ದಿನದ ಮುಷ್ಕರ ನಡೆಸಿದರು.</p>.<p>ಕೇಂದ್ರ ಸರ್ಕಾರದ ವಿರೋಧಿ ನೀತಿಗಳನ್ನು ಕೈಬಿಡುವಂತೆ, ಅಗತ್ಯ ವಸ್ತುಗಳ ಬೆಲೆಗಳನ್ನು ಕೂಡಲೇ ನಿಯಂತ್ರಿಸಬೇಕು. ಸಾರ್ವಜನಿಕ ವಲಯದ ವಿಮಾ ಉದ್ದಿಮೆಯನ್ನು ಖಾಸಗೀಕರಣ ಮಾಡಬೇಡಿ, ಕಾರ್ಮಿಕರ ಕನಿಷ್ಠ ಕೂಲಿ ತಿಂಗಳಿಗೆ ₹21 ಸಾವಿರ ನಿಗದಿಪಡಿಸುವಂತೆ, ಕೃಷಿ ಉದ್ಯಮವನ್ನು ಬಲಪಡಿಸುವಂತೆ, ವಿಮಾ ಕಂತುಗಳ ಮೇಲಿನ ಜಿಎಸ್ಟಿಯನ್ನು ಹಿಂತೆಗೆಯುವಂತೆ ಒತ್ತಾಯಿಸಿ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು. ಹೊಸ ಪಿಂಚಣಿಯನ್ನು ಕೈಬಿಟ್ಟು ಹಳೇ ಪಿಂಚಣಿ ವ್ಯವಸ್ಥೆ ಜಾರಿ ಮಾಡಲು, ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಕಲ್ಪಿಸುವಂತೆ ಮುಷ್ಕರ ನಿರತ ನೌಕರರು ಆಗ್ರಹಿಸಿದರು.</p>.<p>ಪ್ರಧಾನ ಕಾರ್ಯದರ್ಶಿ ಎಂ.ರವಿ,ಎಂ.ಶರಣಗೌಡ, ಕಾಂ.ಎ.ಶ್ರೀಧರ್, ಕಾಂ.ವಿ.ಹೆಚ್.ರಾಘವೇಂದ್ರ, ಎಲ್ಐಸಿ ವರ್ಗ-1 ನೌಕರರ ಸಂಘದ ಅಧ್ಯಕ್ಷ ಎಸ್.ಸೇತುರಾಮ, ಸಾಮಾನ್ಯ ವಿಮಾ ನೌಕರರ ಸಂಘದ ಕಾರ್ಯದರ್ಶಿ ಮೃತ್ಯಂಜೇಶ್ವರ್, ಅಭಿವೃದ್ಧಿ ಅಧಿಕಾರಿಗಳ ಸಂಘದ ಡಿ.ಬಿ.ಕಟ್ಟಿಮನಿ, ವೀರೇಶ, ಕ್ರಿಷ್ಣಮೂರ್ತಿ,ಜಮುನಾ.ವಿ.ಎಸ್, ಜಿ.ಲತಾ ಹಾಗೂ ರಾಯಚೂರು ವಿಭಾಗದ ಸೇರಿದಂತೆ 6 ಜಿಲ್ಲೆಗಳ 16 ಶಾಖೆಗಳ ನೌಕರರು ಮುಷ್ಕರದಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು: </strong>ಕೇಂದ್ರ ಕಾರ್ಮಿಕ ಸಂಘಟನೆಗಳ ಕರೆಯ ಮೇರೆಗೆ ಅಖಿಲ ಭಾರತ ವಿಮಾ ನೌಕರರ ಸಂಘದ ಸದಸ್ಯರುವಿಭಾಗೀಯ ಕಚೇರಿ ಎದುರುಬುಧವಾರ ಒಂದು ದಿನದ ಮುಷ್ಕರ ನಡೆಸಿದರು.</p>.<p>ಕೇಂದ್ರ ಸರ್ಕಾರದ ವಿರೋಧಿ ನೀತಿಗಳನ್ನು ಕೈಬಿಡುವಂತೆ, ಅಗತ್ಯ ವಸ್ತುಗಳ ಬೆಲೆಗಳನ್ನು ಕೂಡಲೇ ನಿಯಂತ್ರಿಸಬೇಕು. ಸಾರ್ವಜನಿಕ ವಲಯದ ವಿಮಾ ಉದ್ದಿಮೆಯನ್ನು ಖಾಸಗೀಕರಣ ಮಾಡಬೇಡಿ, ಕಾರ್ಮಿಕರ ಕನಿಷ್ಠ ಕೂಲಿ ತಿಂಗಳಿಗೆ ₹21 ಸಾವಿರ ನಿಗದಿಪಡಿಸುವಂತೆ, ಕೃಷಿ ಉದ್ಯಮವನ್ನು ಬಲಪಡಿಸುವಂತೆ, ವಿಮಾ ಕಂತುಗಳ ಮೇಲಿನ ಜಿಎಸ್ಟಿಯನ್ನು ಹಿಂತೆಗೆಯುವಂತೆ ಒತ್ತಾಯಿಸಿ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು. ಹೊಸ ಪಿಂಚಣಿಯನ್ನು ಕೈಬಿಟ್ಟು ಹಳೇ ಪಿಂಚಣಿ ವ್ಯವಸ್ಥೆ ಜಾರಿ ಮಾಡಲು, ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಕಲ್ಪಿಸುವಂತೆ ಮುಷ್ಕರ ನಿರತ ನೌಕರರು ಆಗ್ರಹಿಸಿದರು.</p>.<p>ಪ್ರಧಾನ ಕಾರ್ಯದರ್ಶಿ ಎಂ.ರವಿ,ಎಂ.ಶರಣಗೌಡ, ಕಾಂ.ಎ.ಶ್ರೀಧರ್, ಕಾಂ.ವಿ.ಹೆಚ್.ರಾಘವೇಂದ್ರ, ಎಲ್ಐಸಿ ವರ್ಗ-1 ನೌಕರರ ಸಂಘದ ಅಧ್ಯಕ್ಷ ಎಸ್.ಸೇತುರಾಮ, ಸಾಮಾನ್ಯ ವಿಮಾ ನೌಕರರ ಸಂಘದ ಕಾರ್ಯದರ್ಶಿ ಮೃತ್ಯಂಜೇಶ್ವರ್, ಅಭಿವೃದ್ಧಿ ಅಧಿಕಾರಿಗಳ ಸಂಘದ ಡಿ.ಬಿ.ಕಟ್ಟಿಮನಿ, ವೀರೇಶ, ಕ್ರಿಷ್ಣಮೂರ್ತಿ,ಜಮುನಾ.ವಿ.ಎಸ್, ಜಿ.ಲತಾ ಹಾಗೂ ರಾಯಚೂರು ವಿಭಾಗದ ಸೇರಿದಂತೆ 6 ಜಿಲ್ಲೆಗಳ 16 ಶಾಖೆಗಳ ನೌಕರರು ಮುಷ್ಕರದಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>