ಲಿಂಗಸುಗೂರು: ತಾಲ್ಲೂಕಿನ ಬೆಂಡೋಣಿ ಗ್ರಾಮದ ಹೊರವಲಯದ ಜಮೀನದಲ್ಲಿ ಗುರುವಾರ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ನೂರ್ ಅಹ್ಮದ ರಾಜಾಸಾಬ್ (23) ಸಿಡಿಲು ಬಡಿದು ಮೃತಪಟ್ಟ ಘಟನೆ ಜರುಗಿದೆ.
ಸಂಜೆ ವೇಳೆ ಭಾರಿ ಗಾಳಿ ಮಧ್ಯೆ ಗುಡಗು ಸಿಡಿಲು ಅರ್ಭಟ ವೇಳೆ ಈ ಘಟನೆ ಜರುಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದು ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದರು ಫಲಕಾರಿ ಆಗಲಿಲ್ಲ ಎಂದು ಹೇಳಿದರು.
ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ತಹಶೀಲ್ದಾರ ಡಿ.ಎಸ್ ಜಮಾದಾರ, ಕಂದಾಯ ನಿರೀಕ್ಷಕ ರಾಮಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.