ರಾಯಚೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ ವೃಂದಾವನದ ಮೂಲ ಅರ್ಚಕ ಪವಮಾನಾಚಾರ ಪೂಜಾರ ಗುರುರಾಜ ಆಚಾರ(67) ಶನಿವಾರ ಬೆಳಿಗ್ಗೆ ನಿಧನರಾದರು.
ಪವಮಾನಾಚಾರ ಅವರಿಗೆ ಪತ್ನಿ ಹಾಗೂ ಮೂವರು ಪುತ್ರರು ಇದ್ದಾರೆ.
ಪವಮಾನಾಚಾರ ಅವರು ಬಿಎಎಲ್ಎಲ್ಬಿ ಓದಿದರೂ ಮಠದ ಅರ್ಚಕರಾಗಿ 20 ವರ್ಷ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ತುಂಗಭದ್ರಾ ನದಿ ತೀರದಲ್ಲಿ ಪವಮಾನಾಚಾರ ಅಂತ್ಯ ಸಂಸ್ಕಾರ ನಡೆಯಿತು.