ಮಸ್ಕಿ ಪಟ್ಟಣ, ಮುದಗಲ್ ಪಟ್ಟಣ, ಸಿಂಧನೂರು, ಲಿಂಗಸುಗೂರು ಹಾಗೂ ರಾಯಚೂರಿನಲ್ಲಿ ವಾಸ್ತವ್ಯ ಉಳಿದು ಸ್ವಯಂ ಸ್ಫೂರ್ತಿಯಿಂದ ಕ್ಷೇತ್ರದಾದ್ಯಂತ ಪ್ರಚಾರ ಮಾಡುತ್ತಿದ್ದಾರೆ. ಮುಖ್ಯವಾಗಿ ಬಹಿರಂಗ ಸಭೆ ಮತ್ತು ಮತಯಾಚನೆಗೆ ಬರುವ ರಾಜ್ಯಮಟ್ಟದ ನಾಯಕರಿಗಾಗಿ ಪೂರ್ವಸಿದ್ಧತೆ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.