ವಿಶ್ವ ಸಂಸ್ಥೆಯು 2023ನೇ ವರ್ಷವನ್ನು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಿಸಿದೆ. ಈ ಅಂತರಾಷ್ಟ್ರೀಯ ವರ್ಷಾಚರಣೆಗೆ ಪೂರಕವಾದ ಅಭಿಯಾನವು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಿಂದಲೇ ಪ್ರಾರಂಭವಾಗುತ್ತಿರುವುದು ವಿಶೇಷ. ಈ ಸಮಾವೇಶವನ್ನು ಕೇಂದ್ರ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಗಸ್ಟ್ 27ರಂದು ಉದ್ಘಾಟಿಸಿ ‘ಸಿರಿಧಾನ್ಯ‘ ಉತ್ಪಾದನೆ ಮತ್ತು ಮೌಲ್ಯಾವರ್ಧನೆಗೆ ಸಂಬಂಧಿಸಿದಂತೆ ರೈತರಿಗೆ, ಸಿರಿಧಾನ್ಯ ಉದ್ದಿಮೆದಾರರು, ಪ್ರಾರಂಭದಾರರು ರೈತ ಉತ್ಪಾದಕರ ಸಂಘಗಳು, ಹೂಡಿಕೆದಾರರು, ರಫ್ತುದಾರರು, ಕೃಷಿ ತಜ್ಞರು, ಬ್ಯಾಂಕ್ ಸಿಬ್ಬಂದಿ ಮತ್ತು ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಸಮಗ್ರವಾಗಿ ಚರ್ಚಿ ಮಾಡಲಿದ್ದಾರೆ.