<p><strong>ಮಸ್ಕಿ (ರಾಯಚೂರು ಜಿಲ್ಲೆ):</strong> ಅರಣ್ಯ ಇಲಾಖೆಗೆ ಸೇರಿದ ಸಂರಕ್ಷಿತ ಪ್ರದೇಶದ 16 ಎಕರೆ ಜಮೀನನ್ನು ಮಸ್ಕಿ ತಹಶೀಲ್ದಾರ್ ಸುಧಾ ಅರಮನೆ ಅವರು ಖಾಸಗಿಯವರಿಗೆ ಅಕ್ರಮವಾಗಿ ಪಟ್ಟಾಮಾಡಿ ಪಹಣಿಯಲ್ಲಿ ನಮೂದಿಸಿದ ಪ್ರಕರಣ ಬೆಳಕಿಗೆ ಬಂದಿದೆ.</p>.<p>ತಾಲ್ಲೂಕಿನ ತಲೆಖಾನ್ ಹೋಬಳಿಯ ಬಗ್ಗಲಗುಡ್ಡ ಗ್ರಾಮದಲ್ಲಿ ಅರಣ್ಯ ಇಲಾಖೆಗೆ ಸೇರಿದ ಸರ್ವೆ ನಂ 28ರ 447.3 ಎಕರೆ ಪೈಕಿ 16 ಎಕರೆ ರಕ್ಷಿತ ಪ್ರದೇಶದ ಅರಣ್ಯ ಭೂಮಿಯನ್ನು ಯರದೊಡ್ಡಿ ತಾಂಡಾದ 8 ಜನರಿಗೆ ಅರಣ್ಯ ಇಲಾಖೆ ನಿಯಮ ಉಲ್ಲಂಘಿಸಿ ತಹಶೀಲ್ದಾರ್ ಅವರು (ವರ್ಗಾವಣೆ ಸಂಖ್ಯೆಎಚ್–9/2023-24, 23-2-2024) ಹಂಚಿಕೆ ಮಾಡಿದ್ದಾರೆ.</p>.<p>ಎಸಿ ನ್ಯಾಯಾಲಯದಲ್ಲಿ ದೂರು ದಾಖಲು: ಮಸ್ಕಿ ತಾಲ್ಲೂಕಿನ ಬಗ್ಗಲಗುಡ್ಡದ ಅರಣ್ಯ ರಕ್ಷಿತ ಪ್ರದೇಶದ 16 ಎಕರೆಯನ್ನು 8 ಜನರಿಗೆ ತಲಾ 2 ಎಕರೆಯಂತೆ ಹಂಚಿಕೆ ಮಾಡಿರುವ ತಹಶೀಲ್ದಾರ್ ಅವರ ಕ್ರಮ ಪ್ರಶ್ನಿಸಿ ಲಿಂಗಸುಗೂರಿನ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ವಿದ್ಯಾಶ್ರೀ ದಿಡ್ಡಿಮನಿ ಅವರು 2024ರ ಜೂನ್ 6ರಂದು ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದು, ಅರಣ್ಯ ಭೂಮಿ ಹಂಚಿಕೆಯನ್ನು ರದ್ದಪಡಿಸುವಂತೆ ಕೋರಿದ್ದಾರೆ.</p>.<p>ಜೂ 25ರಂದು ವಿಚಾರಣೆ: ಅರಣ್ಯ ಇಲಾಖೆ ನೀಡಿದ ದೂರಿನ ಮೇಲೆ ಮಸ್ಕಿ ತಹಶೀಲ್ದಾರ್ ಸುಧಾ ಅರಮನೆ ಹಾಗೂ ಅರಣ್ಯ ಇಲಾಖೆ ಭೂಮಿ ಪಟ್ಟಾ ಮಾಡಿಸಿಕೊಂಡ 8 ಜನರ ವಿರುದ್ಧ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ. ಈ ಸಂಬಂಧ ಎಲ್ಲ 9 ಜನ ಪ್ರತಿವಾದಿಗಳಿಗೆ ಉಪವಿಭಾಗಾಧಿಕಾರಿ ನ್ಯಾಯಾಲಯವು ನೋಟಿಸ್ ಜಾರಿ ಮಾಡಿ ಜೂನ್ 25ರಂದು ವಿಚಾರಣೆಗೆ ಹಾಜರಾಗಲು ಸೂಚಿಸಿದೆ.</p>.<p>ಅರಣ್ಯ(ಸಂರಕ್ಷಣಾ) ಕಾಯ್ದೆ 1980ರ ಕಲಂ 2 ಪ್ರಕಾರ ಕೇಂದ್ರ ಸರ್ಕಾರದ ಪೂರ್ವ ಅನುಮತಿ ಇಲ್ಲದೇ ಯಾವುದೇ ಅರಣ್ಯ ಭೂಮಿಯನ್ನು ಅರಣ್ಯೇತರ ಚಟುವಟಿಕೆಗೆ ಬಳಸಿಕೊಳ್ಳುವುದಕ್ಕೆ ನಿಷೇಧವಿದೆ. ತಹಶೀಲ್ದಾರ್ ಅವರು ಅರಣ್ಯ ಇಲಾಖೆ ಕಾನೂನು ಉಲ್ಲಂಘಿಸಿದ್ದಲ್ಲದೆ ಹಿರಿಯ ಅಧಿಕಾರಿಗಳ ಗಮನಕ್ಕೂ ತಾರದೇ ಅರಣ್ಯ ಭೂಮಿಯನ್ನು 8 ಜನರಿಗೆ ಹಂಚಿಕೆ ಮಾಡಿದ್ದು ಸಂಶಯಗಳಿಗೆ ಎಡೆಮಾಡಿದೆ.</p>.<p>ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳಿಂದ ಸೂಕ್ತ ವರದಿ ಪಡೆಯದೇ ಏಕಪಕ್ಷೀಯವಾಗಿ ಭೂಮಿ ಹಂಚಿಕೆ ಮಾಡಲಾಗಿದ್ದು, ತಹಶೀಲ್ದಾರ್ ಕಚೇರಿಯ ಕೆಲವು ಸಿಬ್ಬಂದಿ ಇದರಲ್ಲಿ ಶಾಮೀಲಾಗಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಸ್ಕಿ (ರಾಯಚೂರು ಜಿಲ್ಲೆ):</strong> ಅರಣ್ಯ ಇಲಾಖೆಗೆ ಸೇರಿದ ಸಂರಕ್ಷಿತ ಪ್ರದೇಶದ 16 ಎಕರೆ ಜಮೀನನ್ನು ಮಸ್ಕಿ ತಹಶೀಲ್ದಾರ್ ಸುಧಾ ಅರಮನೆ ಅವರು ಖಾಸಗಿಯವರಿಗೆ ಅಕ್ರಮವಾಗಿ ಪಟ್ಟಾಮಾಡಿ ಪಹಣಿಯಲ್ಲಿ ನಮೂದಿಸಿದ ಪ್ರಕರಣ ಬೆಳಕಿಗೆ ಬಂದಿದೆ.</p>.<p>ತಾಲ್ಲೂಕಿನ ತಲೆಖಾನ್ ಹೋಬಳಿಯ ಬಗ್ಗಲಗುಡ್ಡ ಗ್ರಾಮದಲ್ಲಿ ಅರಣ್ಯ ಇಲಾಖೆಗೆ ಸೇರಿದ ಸರ್ವೆ ನಂ 28ರ 447.3 ಎಕರೆ ಪೈಕಿ 16 ಎಕರೆ ರಕ್ಷಿತ ಪ್ರದೇಶದ ಅರಣ್ಯ ಭೂಮಿಯನ್ನು ಯರದೊಡ್ಡಿ ತಾಂಡಾದ 8 ಜನರಿಗೆ ಅರಣ್ಯ ಇಲಾಖೆ ನಿಯಮ ಉಲ್ಲಂಘಿಸಿ ತಹಶೀಲ್ದಾರ್ ಅವರು (ವರ್ಗಾವಣೆ ಸಂಖ್ಯೆಎಚ್–9/2023-24, 23-2-2024) ಹಂಚಿಕೆ ಮಾಡಿದ್ದಾರೆ.</p>.<p>ಎಸಿ ನ್ಯಾಯಾಲಯದಲ್ಲಿ ದೂರು ದಾಖಲು: ಮಸ್ಕಿ ತಾಲ್ಲೂಕಿನ ಬಗ್ಗಲಗುಡ್ಡದ ಅರಣ್ಯ ರಕ್ಷಿತ ಪ್ರದೇಶದ 16 ಎಕರೆಯನ್ನು 8 ಜನರಿಗೆ ತಲಾ 2 ಎಕರೆಯಂತೆ ಹಂಚಿಕೆ ಮಾಡಿರುವ ತಹಶೀಲ್ದಾರ್ ಅವರ ಕ್ರಮ ಪ್ರಶ್ನಿಸಿ ಲಿಂಗಸುಗೂರಿನ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ವಿದ್ಯಾಶ್ರೀ ದಿಡ್ಡಿಮನಿ ಅವರು 2024ರ ಜೂನ್ 6ರಂದು ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದು, ಅರಣ್ಯ ಭೂಮಿ ಹಂಚಿಕೆಯನ್ನು ರದ್ದಪಡಿಸುವಂತೆ ಕೋರಿದ್ದಾರೆ.</p>.<p>ಜೂ 25ರಂದು ವಿಚಾರಣೆ: ಅರಣ್ಯ ಇಲಾಖೆ ನೀಡಿದ ದೂರಿನ ಮೇಲೆ ಮಸ್ಕಿ ತಹಶೀಲ್ದಾರ್ ಸುಧಾ ಅರಮನೆ ಹಾಗೂ ಅರಣ್ಯ ಇಲಾಖೆ ಭೂಮಿ ಪಟ್ಟಾ ಮಾಡಿಸಿಕೊಂಡ 8 ಜನರ ವಿರುದ್ಧ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ. ಈ ಸಂಬಂಧ ಎಲ್ಲ 9 ಜನ ಪ್ರತಿವಾದಿಗಳಿಗೆ ಉಪವಿಭಾಗಾಧಿಕಾರಿ ನ್ಯಾಯಾಲಯವು ನೋಟಿಸ್ ಜಾರಿ ಮಾಡಿ ಜೂನ್ 25ರಂದು ವಿಚಾರಣೆಗೆ ಹಾಜರಾಗಲು ಸೂಚಿಸಿದೆ.</p>.<p>ಅರಣ್ಯ(ಸಂರಕ್ಷಣಾ) ಕಾಯ್ದೆ 1980ರ ಕಲಂ 2 ಪ್ರಕಾರ ಕೇಂದ್ರ ಸರ್ಕಾರದ ಪೂರ್ವ ಅನುಮತಿ ಇಲ್ಲದೇ ಯಾವುದೇ ಅರಣ್ಯ ಭೂಮಿಯನ್ನು ಅರಣ್ಯೇತರ ಚಟುವಟಿಕೆಗೆ ಬಳಸಿಕೊಳ್ಳುವುದಕ್ಕೆ ನಿಷೇಧವಿದೆ. ತಹಶೀಲ್ದಾರ್ ಅವರು ಅರಣ್ಯ ಇಲಾಖೆ ಕಾನೂನು ಉಲ್ಲಂಘಿಸಿದ್ದಲ್ಲದೆ ಹಿರಿಯ ಅಧಿಕಾರಿಗಳ ಗಮನಕ್ಕೂ ತಾರದೇ ಅರಣ್ಯ ಭೂಮಿಯನ್ನು 8 ಜನರಿಗೆ ಹಂಚಿಕೆ ಮಾಡಿದ್ದು ಸಂಶಯಗಳಿಗೆ ಎಡೆಮಾಡಿದೆ.</p>.<p>ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳಿಂದ ಸೂಕ್ತ ವರದಿ ಪಡೆಯದೇ ಏಕಪಕ್ಷೀಯವಾಗಿ ಭೂಮಿ ಹಂಚಿಕೆ ಮಾಡಲಾಗಿದ್ದು, ತಹಶೀಲ್ದಾರ್ ಕಚೇರಿಯ ಕೆಲವು ಸಿಬ್ಬಂದಿ ಇದರಲ್ಲಿ ಶಾಮೀಲಾಗಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>