ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು: ಕೆಸರಿನಲ್ಲಿ ಸಿಲುಕಿದ ಭತ್ತದ ಲಾರಿ

Published 18 ಡಿಸೆಂಬರ್ 2023, 14:40 IST
Last Updated 18 ಡಿಸೆಂಬರ್ 2023, 14:40 IST
ಅಕ್ಷರ ಗಾತ್ರ

ರಾಯಚೂರು:‌ ನಗರದ ಗದ್ವಾಲ್ ರಸ್ತೆಯ ಕೆಸರಿನಲ್ಲಿ ಭತ್ತದ ಲಾರಿ ಸಿಕ್ಕಿ ಹಾಕಿಕೊಂಡು ಲಾರಿ ಚಾಲಕ ಪರದಾಡಿದ ಘಟನೆ ಸೋಮವಾರ ನಡೆದಿದೆ.

ನಗರದ ಬಸವನ ಭಾವಿ ವೃತ್ತದಿಂದ ಗದ್ವಾಲ್ ರಸ್ತೆಗೆ ತೆರಳುವ ತಿರುವಿನಲ್ಲಿ ಲಾರಿ ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡಿದೆ. ಗದ್ವಾಲ್ ರಸ್ತೆಯಲ್ಲಿ ಬೃಹದಾಕಾರದ ಗುಂಡಿಗಳು ಬಿದ್ದಿವೆ. ಚರಂಡಿ ನೀರು ರಸ್ತೆ ಮೇಲೆಯೇ ಹರಿಯುತ್ತಿರುವುದರಿಂದ ಕೆಸರು ಗದ್ದೆಯಾಗಿದೆ.

ಭತ್ತ ಸಾಗಿಸುತ್ತಿದ್ದ ಲಾರಿಯು ಗುಂಡಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದು ಹೊರ ತೆಗೆಯಲು ಹರಸಾಹಸ ಪಡಬೇಕಾಯಿತು. ನಂತರ ಮತ್ತೊಂದು ಲಾರಿಯಲ್ಲಿ ಭತ್ತವನ್ನು ಅನ್‌ಲೋಡ್ ಮಾಡಿ ಲಾರಿಯನ್ನು ಹೊರ ತೆಗೆಯಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT