ಮಾನ್ವಿ: ದೆಹಲಿಯಲ್ಲಿ ಜ. 29ರಂದು ಪ್ರಧಾನಿ ನರೇಂದ್ರ ಮೋದಿ ಜೊತೆ ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮ ನಡೆಯಲಿದೆ. ತಾಲ್ಲೂಕಿನ ನೀರಮಾನ್ವಿ ಗ್ರಾಮದ ಆರ್ಎಂಎಸ್ಎ ಆದರ್ಶ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿ ರಾಘವೇಂದ್ರ ಗೊಂಚಕಾರ್ ಹಾಗೂ ಪಾಲಕರ ಪ್ರತಿನಿಧಿಯಾಗಿ 10ನೇ ತರಗತಿ ವಿದ್ಯಾರ್ಥಿನಿ ಚಂದನಾ ಬಾಗೋಡಿ ಅವರ ತಂದೆ ಚಂದ್ರಶೇಖರ ಬಾಗೋಡಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ ಎಂದು ಶಾಲೆ ಮುಖ್ಯಶಿಕ್ಷಕ ತಿಳಿಸಿದ್ದಾರೆ.