ಏಳು ದಶಕಗಳ ಅವಧಿಯಲ್ಲಿ ಅಧಿಕಾರಿಗಳು, ಆಡಳಿತದಲ್ಲಿದ್ದ ಸರ್ಕಾರಗಳು ಗೊಂದಲ ಸೃಷ್ಟಿಸುವ ಸುತ್ತೋಲೆ ಹೊರಡಿಸುತ್ತ ನಮ್ಮ ಸಮುದಾಯಕ್ಕೆ ಇಂದಿಗೂ ಪರಿಶಿಷ್ಟ ಜಾತಿ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ದೊರಕದಂತೆ ಷಡ್ಯಂತ್ರ ರೂಪಿಸುತ್ತ ಬಂದಿವೆ ಎಂದು ದೂರಿದರು.ಮುಖ್ಯಮಂತ್ರಿಗಳು ಸೂಕ್ತ ಸುತ್ತೋಲೆ ಹೊರಡಿಸಲು ಮುಂದಾಗದೆ ಹೋದಲ್ಲಿ ಇಡೀ ಜಂಗಮ ಸಮುದಾಯ ಉಪವಾಸ ಸತ್ಯಾಗ್ರಹ ಆರಂಭಿಸಲಿದೆ ಎಂದು ಎಚ್ಚರಿಕೆ ನೀಡಿದರು. ಪ್ರಭುಸ್ವಾಮಿ ಅತ್ನೂರು, ಮಹಾದೇವಯ್ಯ ಗೌಡೂರು, ಶರಣಯ್ಯ ದಾಸೋಹಮಠ, ಶಿವಕುಮಾರ ನಂದಿಕೋಲಮಠ, ಬಸಯ್ಯ ಹಿರೇಮಠ, ವೀರಭದ್ರಯ್ಯ ಯಲಗಲದಿನ್ನಿ, ಶರಣಯ್ಯ ಹಿರೇಮಠ, ಚೆನ್ನಬಸವ ಹಿರೇಮಠ, ಎನ್.ಬಸವರಾಜ, ಗುರುಬಾಯಿ ಹಿರೇಮಠ, ಸುಹಾಸಿನಿ, ನಯನ, ವೀರಭದ್ರಯ್ಯ ಗುಂತಗೋಳ, ಅಮರೇಶ ಗಂಭೀರಮಠ, ಶೇಖರಯ್ಯ ಹೊನ್ನಳ್ಳಿ, ಈರಯ್ಯ ಗುರುಗುಂಟಾ ಇದ್ದರು.