ಬಿಸಿಲುನಾಡು ಎಂದು ಖ್ಯಾತಿ ಪಡೆದ ರಾಯಚೂರಿನಲ್ಲಿ ಬೇಸಿಗೆಯಲ್ಲಿ ಆರಾಮವಾಗಿ ಕೂರಬೇಕಾದರೆ ಸೂಕ್ತ ಸಾರ್ವಜನಿಕ ಪ್ರದೇಶಗಳಿಲ್ಲ. ಉದ್ಯಾನವನಗಳು ಪಾಳುಬಿದ್ದ ಬಿದ್ದ ಹೊಲಗಳಂತಾಗಿವೆ. ಸುತ್ತಲೂ ಜಾಲಿಗಿಡಗಳು, ಕಸ, ತ್ಯಾಜ್ಯ ಎಸೆಯುವುದರಿಂದ ಕಲುಷಿತ ವಾತಾವರಣ ನಿರ್ಮಾಣವಾಗಿದೆ. ನಗರಸಭೆ ಆಡಳಿತ ಮಂಡಳಿ ಲಕ್ಷಾಂತರ ರೂಪಾಯಿ ಅಭಿವೃದ್ಧಿ ಕಾರ್ಯಗಳಿಗೆ ವ್ಯಯಿಸಿದರೂ ಉದ್ಯಾನವನಗಳ ಅಭಿವೃದ್ಧಿಗೆ ಸಮರ್ಪಕ ಅನುದಾನ ನೀಡದೇ ಸಿಬ್ಬಂದಿಯಿಂದ ನಿರ್ವಹಣೆ ಮಾಡಲು ಮುಂದಾಗುತ್ತಿಲ್ಲ.