ರಾಯಚೂರು: ಕೂಲಿ ಕೆಲಸಕ್ಕಾಗಿ ಗುಳೆ ಹೋಗಿದ್ದ ಕಾರ್ಮಿಕರು ಹೈದರಾಬಾದ್ನಿಂದ ಬೊಲೆರೊ ವಾಹನದಲ್ಲಿ ಮರಳುತ್ತಿದ್ದಾಗ ಲಾರಿ ಡಿಕ್ಕಿಯಾಗಿದ್ದರಿಂದ ಸ್ಥಳದಲ್ಲಿಯೇ ನಾಲ್ಕು ಮಂದಿ ಮೃತಪಟ್ಟಿದ್ದು, ಮೂವರು ಗಾಯಗೊಂಡ ಘಟನೆ ಶಂಶಾಬಾದ್ ವರ್ತುಲ ರಸ್ತೆಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕಕ್ಕೇರಿಯ ಬಸಮ್ಮ (35), ಹನುಮಂತ (40), ಲಿಂಗಸುಗೂರು ತಾಲ್ಲೂಕಿನ ರಾಯದುರ್ಗದ ಶ್ರೀದೇವಿ (36), ರಂಗಪ್ಪ (48) ಮೃತಪಟ್ಟವರು. ರಾಯದುರ್ಗದ ಶರಣಪ್ಪ, ಅಮರಪ್ಪ ಹಾಗೂ ಕೊಳ್ಳಪ್ಪ ಗಾಯಗೊಂಡಿದ್ದಾರೆ. ಚಿಕಿತ್ಸೆಗಾಗಿ ಉಸ್ಮಾನಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೊಲೆರೊ ದುರಸ್ತಿಗಾಗಿ ರಸ್ತೆ ಪಕ್ಕದಲ್ಲಿ ನಿಲ್ಲಿಸಲಾಗಿತ್ತು. ಲಾರಿ ಚಾಲಕನು ಇದನ್ನು ಗಮನಿಸಿಲ್ಲ. ಶಂಶಾಬಾದ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.