ಸಣ್ಣ ಪ್ರಮಾಣದ ಮಳೆಯಾದರೆ ಸಾಕು; ನಗರ ವ್ಯಾಪ್ತಿಯ ಬಹಳಷ್ಟು ರಸ್ತೆಗಳ ಸ್ವರೂಪವೇ ಬದಲಾಗುತ್ತಿದೆ. ಎಸ್ಪಿ ಕಚೇರಿ ಎದುರಿನಿಂದ ಎಲ್ಬಿಎಸ್ ನಗರ ಸಂಪರ್ಕಿಸುವ ಮಾರ್ಗ, ಟಿಪ್ಪು ಸುಲ್ತಾನ ರಸ್ತೆ, ಇನ್ಫೆಂಟ್ ಜೀಸಸ್ ಶಾಲೆ ಎದುರಿನ ರಸ್ತೆಗಳು ಅಕ್ಷರಶಃ ಸಂಚಲನವಿಲ್ಲದ ಕಾಲುವೆಯಾಗುತ್ತವೆ. ನಗರದ ವ್ಯಾಪ್ತಿಯಲ್ಲಿರುವ ಹೊಸೂರ, ರಾಂಪುರ, ಅಸ್ಕಿಹಾಳ ಸಂಪರ್ಕಿಸುವ ಕೆಲವು ಮಾರ್ಗಗಳು ಕೆಸರುಗದ್ದೆಗಳಾಗಿ ಮಾರ್ಪಡುತ್ತಿವೆ.