ಎಲ್ಲೆಂದರಲ್ಲಿ ಒಡೆದ ನೀರಿನ ಪೈಪ್ಲೈನ್ಗಳು, ಹೆಚ್ಚುತ್ತಿರುವ ಸೋರಿಕೆ, ಪೈಪ್ಲೈನ್ನಲ್ಲಿ ಚರಂಡಿ ನೀರು ಸೇರ್ಪಡೆ, ಓವರ್ಹೆಡ್ ಟ್ಯಾಂಕ್ಗಳ ಅಸ್ವಚ್ಛತೆ, ಪೂರೈಕೆಯಾಗುತ್ತಿರುವ ನೀರಿನ ಮಾದರಿಗಳ ಪರೀಕ್ಷೆ ಸಕಾಲಕ್ಕೆ ಆಗದಿರುವುದು. ಹೀಗೆ ಹತ್ತು ಹಲವು ಸಮಸ್ಯೆಗಳಿದ್ದರೂ ಕನಿಷ್ಠ ಈ ಬಗ್ಗೆ ನಗರಸಭೆ ಆಡಳಿತ ಮಂಡಳಿ ಕಾಳಜಿ ವಹಿಸದೇ ಇರುವುದು ದುರಂತಕ್ಕೆ ಕಾರಣವಾಗಿದೆ ಎಂದು ದೂರಿದರು.