<p>ರಾಯಚೂರು: ಕ್ರೀಡೆಗಳು ಉತ್ಸಾಹವನ್ನು ಹೆಚ್ಚಿಸುತ್ತವೆ. ಒತ್ತಡದ ಕೆಲಸದ ಮಧ್ಯೆಯೂ ಪತ್ರಕರ್ತರು ಕ್ರಿಕೆಟ್ ಪಂದ್ಯ ಆಡುತ್ತಿರುವುದು ಸಂತೋಷದ ಸಂಗತಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಹೇಳಿದರು.</p>.<p>ನಗರದ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮೈದಾನದಲ್ಲಿ ರಾಯಚೂರು ರಿಪೋರ್ಟರ್ಸ್ ಗಿಲ್ಡ್ನಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ನಿಮಿತ್ತ ಶನಿವಾರ ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.</p>.<p>ಪತ್ರಕರ್ತರು ಒಂದೇ ಕಡೆಗೆ ಸ್ನೇಹಿತರಾಗಿ ಸೇರಿ ಆಟವಾಡುವುದು ನಿಜಕ್ಕೂ ಖುಷಿಯ ವಿಚಾರ. ಆಟದಲ್ಲಿ ಸೋಲು, ಗೆಲುವು ಸಹಜ. ಅದನ್ನು ಮುಖ್ಯವಾಗಿ ತೆಗೆದುಕೊಳ್ಳಬಾರದು. ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಮಹತ್ವದ್ದಾಗಿದೆ. ಇದನ್ನು ಹೀಗೇ ಮುಂದುವರಿಸಬೇಕು ಎಂದು ಸಲಹೆ ನೀಡಿದರು.</p>.<p>ಕೃಷಿ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ರಾಜಣ್ಣ ಅವರು ಮಾತನಾಡಿ, ದಿನಕ್ಕೊಂದು ತಾಸು ವ್ಯಾಯಾಮ; ದಿನವಿಡೀ ಆರಾಮ ಎಂಬುದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೈಹಿಕವಾಗಿ ಸದೃಢವಾಗಿದ್ದರೆ ಮನಸ್ಸು ಕೂಡಾ ಸಂತೋಷದಿಂದ ಕೂಡಿರುತ್ತದೆ ಎಂದು ಹೇಳಿದರು.</p>.<p>ರಾಯಚೂರು ರಿಪೋರ್ಟ್ರ್ಸ್ ಗಿಲ್ಡ್ ಕಾರ್ಯದರ್ಶಿ ವಿಜಯ ಜಾಗಟಗಲ್ ಸ್ವಾಗತಿಸಿದರು. ಗಿಲ್ಡ್ ಅಧ್ಯಕ್ಷ ಚನ್ನಬಸವಣ್ಣ, ಪತ್ರಕರ್ತರಾದ ವೆಂಕಟಸಿಂಗ್, ಬಸವರಾಜ ನಾಗಡಗಿನ್ನಿ, ಶಿವಮೂರ್ತಿ ಹಿರೇಮಠ ಇದ್ದರು.</p>.<p>ಅನಿಲ ಕುಂಬ್ಳೆ ತಂಡಕ್ಕೆ ಗೆಲುವು: ಬಸವರಾಜ ನಾಗಡದಿನ್ನಿ ನಾಯಕತ್ವದ ‘ರಾಹುಲ್ ದ್ರಾವಿಡ್ ತಂಡ’, ವೆಂಕಟಸಿಂಗ್ ನಾಯಕತ್ವದ ‘ಸುನೀಲ ಗವಾಸ್ಕರ್ ತಂಡ’ ಹಾಗೂ ಚನ್ನಬಸವಣ್ಣ ನಾಯಕತ್ವದ ‘ಅನಿಲ ಕುಂಬ್ಳೆ ತಂಡ’ ತಂಡಗಳ ಮಧ್ಯೆ 8 ಓವರ್ಗಳ ಪಂದ್ಯಾವಳಿಗಳು ನಡೆದವು. ಅನಿಲ ಕುಂಬ್ಳೆ ತಂಡವು ಎರಡೂ ತಂಡಗಳ ವಿರುದ್ಧ ಗೆಲುವು ಸಾಧಿಸಿ ಪ್ರಥಮ ಸ್ಥಾನ ಪಡೆಯಿತು. ಸುನೀಲ ಗವಾಸ್ಕರ್ ತಂಡದ ವಿರುದ್ಧ ಗೆಲುವು ಸಾಧಿಸಿದ ರಾಹುಲ್ ದ್ರಾವಿಡ್ ತಂಡವು ಎರಡನೇ ಸ್ಥಾನ ಪಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಯಚೂರು: ಕ್ರೀಡೆಗಳು ಉತ್ಸಾಹವನ್ನು ಹೆಚ್ಚಿಸುತ್ತವೆ. ಒತ್ತಡದ ಕೆಲಸದ ಮಧ್ಯೆಯೂ ಪತ್ರಕರ್ತರು ಕ್ರಿಕೆಟ್ ಪಂದ್ಯ ಆಡುತ್ತಿರುವುದು ಸಂತೋಷದ ಸಂಗತಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಹೇಳಿದರು.</p>.<p>ನಗರದ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮೈದಾನದಲ್ಲಿ ರಾಯಚೂರು ರಿಪೋರ್ಟರ್ಸ್ ಗಿಲ್ಡ್ನಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ನಿಮಿತ್ತ ಶನಿವಾರ ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.</p>.<p>ಪತ್ರಕರ್ತರು ಒಂದೇ ಕಡೆಗೆ ಸ್ನೇಹಿತರಾಗಿ ಸೇರಿ ಆಟವಾಡುವುದು ನಿಜಕ್ಕೂ ಖುಷಿಯ ವಿಚಾರ. ಆಟದಲ್ಲಿ ಸೋಲು, ಗೆಲುವು ಸಹಜ. ಅದನ್ನು ಮುಖ್ಯವಾಗಿ ತೆಗೆದುಕೊಳ್ಳಬಾರದು. ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಮಹತ್ವದ್ದಾಗಿದೆ. ಇದನ್ನು ಹೀಗೇ ಮುಂದುವರಿಸಬೇಕು ಎಂದು ಸಲಹೆ ನೀಡಿದರು.</p>.<p>ಕೃಷಿ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ರಾಜಣ್ಣ ಅವರು ಮಾತನಾಡಿ, ದಿನಕ್ಕೊಂದು ತಾಸು ವ್ಯಾಯಾಮ; ದಿನವಿಡೀ ಆರಾಮ ಎಂಬುದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೈಹಿಕವಾಗಿ ಸದೃಢವಾಗಿದ್ದರೆ ಮನಸ್ಸು ಕೂಡಾ ಸಂತೋಷದಿಂದ ಕೂಡಿರುತ್ತದೆ ಎಂದು ಹೇಳಿದರು.</p>.<p>ರಾಯಚೂರು ರಿಪೋರ್ಟ್ರ್ಸ್ ಗಿಲ್ಡ್ ಕಾರ್ಯದರ್ಶಿ ವಿಜಯ ಜಾಗಟಗಲ್ ಸ್ವಾಗತಿಸಿದರು. ಗಿಲ್ಡ್ ಅಧ್ಯಕ್ಷ ಚನ್ನಬಸವಣ್ಣ, ಪತ್ರಕರ್ತರಾದ ವೆಂಕಟಸಿಂಗ್, ಬಸವರಾಜ ನಾಗಡಗಿನ್ನಿ, ಶಿವಮೂರ್ತಿ ಹಿರೇಮಠ ಇದ್ದರು.</p>.<p>ಅನಿಲ ಕುಂಬ್ಳೆ ತಂಡಕ್ಕೆ ಗೆಲುವು: ಬಸವರಾಜ ನಾಗಡದಿನ್ನಿ ನಾಯಕತ್ವದ ‘ರಾಹುಲ್ ದ್ರಾವಿಡ್ ತಂಡ’, ವೆಂಕಟಸಿಂಗ್ ನಾಯಕತ್ವದ ‘ಸುನೀಲ ಗವಾಸ್ಕರ್ ತಂಡ’ ಹಾಗೂ ಚನ್ನಬಸವಣ್ಣ ನಾಯಕತ್ವದ ‘ಅನಿಲ ಕುಂಬ್ಳೆ ತಂಡ’ ತಂಡಗಳ ಮಧ್ಯೆ 8 ಓವರ್ಗಳ ಪಂದ್ಯಾವಳಿಗಳು ನಡೆದವು. ಅನಿಲ ಕುಂಬ್ಳೆ ತಂಡವು ಎರಡೂ ತಂಡಗಳ ವಿರುದ್ಧ ಗೆಲುವು ಸಾಧಿಸಿ ಪ್ರಥಮ ಸ್ಥಾನ ಪಡೆಯಿತು. ಸುನೀಲ ಗವಾಸ್ಕರ್ ತಂಡದ ವಿರುದ್ಧ ಗೆಲುವು ಸಾಧಿಸಿದ ರಾಹುಲ್ ದ್ರಾವಿಡ್ ತಂಡವು ಎರಡನೇ ಸ್ಥಾನ ಪಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>