ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ಬೆಳೆ ರಕ್ಷಣೆ ಸಾಹಸ

Last Updated 21 ಸೆಪ್ಟೆಂಬರ್ 2020, 11:49 IST
ಅಕ್ಷರ ಗಾತ್ರ

ಹಟ್ಟಿ ಚಿನ್ನದಗಣಿ: ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಬೆಳೆದ ಬೆಳೆಗಳನ್ನು ಕಾಪಾಡಿಕೊಳ್ಳಲು ರೈತ ಸಮೂಹ ಹರ ಸಾಹಸ ಪಡುತ್ತಿದೆ.

ಗುರುಗುಂಟಾ ಹೋಬಳಿಯ ಕೋಠಾ, ರೋಡಲಬಂಡ, ಮಾಚನೂರು, ಬಂಡೆಭಾವಿ ಹಾಗೂ ಯರಜಂತಿ ಸೇರಿ ಇತರೆ ಪ್ರದೇಶದಲ್ಲಿ ಬಹುತೇಕ ರೈತರು ಎಳ್ಳು ಹಾಗೂ ಸಜ್ಜೆ ಬೆಳೆಯನ್ನು ಕಟಾವು ಮಾಡಿದ್ದಾರೆ. ಆದರೆ ರಾಶಿ ಮಾಡಲು ಮಳೆ ಅಡ್ಡಿಯಾಗಿದೆ. ಗೂಡುಗಳು ಮಳೆಗೆ ಸಿಕ್ಕಿ ಹಾಳಾಗುತ್ತಿವೆ.

ಗೂಡುಗಳು ಹಾಳಾದರೆ ಇಳುವರಿ ಸಿಗುವುದಿಲ್ಲ. ರೈತರು ನಷ್ಟ ಅನುಭವಿಸಬೇಕಾಗುತ್ತದೆ.

ಎಳ್ಳು ಹಾಗೂ ಸಜ್ಜೆ ಗೂಡುಗಳ ಮೇಲೆ ತಾಡಪಾಲ್‌ ಹಾಕಿ ಬೆಳೆ ರಕ್ಷಣೆ ಮಾಡಬೇಕಾದ ಸ್ಥಿತಿ ಎದುರಾಗಿದೆ ಎನ್ನುತ್ತಾರೆ ಗುರುಗುಂಟಾ ಗ್ರಾಮದ ರೈತ ಸೋನನಾಥ ನಾಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT