‘ಕೆರೆ ಹೂಳೆತ್ತುವ ಕೆಲಸ ನಡೆದಿದ್ದು, ಇನ್ನೂರಕ್ಕೂ ಹೆಚ್ಚಿನ ಜನರು ಕೆಲಸ ಮಾಡುತ್ತಿದ್ದಾರೆ. ಅವರೊಂದಿಗೆ ತಾವೂ ಕೆಲಸ ಮಾಡುವುದಾಗಿ ತಿಳಿಸಿದರೂ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ತಾರತಮ್ಯ ಮಾಡುವ ಮೂಲಕ ಕಾರ್ಮಿಕರ ನಡುವೆ ಜಗಳ ತಂದಿಡುವ ಕೆಲಸ ಮಾಡುತ್ತಿದ್ದಾರೆ’ ಎಂದು ಕಾರ್ಮಿಕರಾದ ನರಸಪ್ಪ, ಇಮಾಮ್ ಸಾಬ್, ಅಮರೇಗೌಡ ಪೊಲೀಸ್ ಪಾಟೀಲ, ಹುಸೇನ್ ಸಾಬ್, ಇಮ್ಮಣ್ಣ ಗುಡಗುಂಟಿ, ಭಾಷಾಮಿಯಾ, ಹುಸೇನಮ್ಮ, ಆದಮ್ಮ, ನಬಮ್ಮ, ಗಂಗಮ್ಮ, ಪದ್ದಮ್ಮ, ಅನುಸೂಯಾ, ಪಾಲಮ್ಮ ಮತ್ತು ವಿರುಪಮ್ಮ ಆರೋಪಿಸಿದರು.