<p>ರಾಯಚೂರು: ‘ಮಳೆ, ಬಿಸಿಲು ಎನ್ನದೇ ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲೂ ದೇಶದ ಗಡಿ ಕಾಯುತ್ತಿರುವ ಸೈನಿಕರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಈ ದಿಸೆಯಲ್ಲಿ ಬದ್ಧತೆಯನ್ನು ಪ್ರದರ್ಶಿಸಿದೆ’ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು.</p>.<p>ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಗಿಲ್ ವಿಜಯೋತ್ಸವ ಹಾಗೂ ನಿವೃತ್ತ ಸೈನಿಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘1999ರ ಜುಲೈ 26ರಂದು ದೇಶದ ಸೈನಿಕರು ಆರು ತಿಂಗಳ ಕಾಲ ಹೋರಾಡಿದರು. ಪಾಕಿಸ್ತಾನದ ಸೈನ್ಯವನ್ನು ಹಿಮ್ಮೆಟ್ಟಿಸಿ ವಿಜಯ ಪತಾಕೆ ಹಾರಿಸಿದರು. ಯುದ್ಧದಲ್ಲಿ ವೀರಮರಣ ಹೊಂದಿದ ಸೈನಿಕರನ್ನು ದೇಶದ ಜನ ಗೌರವಿಸಿದ್ದಾರೆ. ದಾನ ಧರ್ಮದ ಮೂಲಕ ಅವರಿಗೆ ನೆರವಾಗಿದ್ದಾರೆ. ಪ್ರೋತ್ಸಾಹಿಸಿದ್ದಾರೆ’ ಎಂದು ತಿಳಿಸಿದರು.</p>.<p>ಮುಖ್ಯ ಅತಿಥಿಯಾಗಿದ್ದ ಶಾಸಕ ಶಿವರಾಜ ಪಾಟೀಲ ಮಾತನಾಡಿ, ‘ಹವಾಮಾನ ವೈಪರೀತ್ಯದ ಮಧ್ಯೆಯೂ ದೇಶದ ಯೋಧರು ಕೆಚ್ಚೆದೆಯಿಂದ ಹೋರಾಡಿದರು. ಪಾಕಿಸ್ತಾನದ ಸೈನಿಕರನ್ನು ಮತ್ತೊಮ್ಮೆ ಭಾರತದ ನೆಲದತ್ತ ನೋಡದಂತೆ ಅಟ್ಟಿಸಿದ್ದಾರೆ’ ಎಂದರು.</p>.<p>‘ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಬಂದಿದೆ. ಸಂಸ್ಥೆ ಹಾಗೂ ಸಂಸ್ಥೆಯನ್ನು ನಡೆಸಿಕೊಂಡು ಹೊರಟಿರುವ ಅಕ್ಕ ಸ್ಮಿತಾ ಅವರಿಗೆ ಚಿರಋಣಿಯಾಗಿದ್ದೇವೆ’ ಎಂದು ಹೇಳಿದರು.</p>.<p>ಸ್ಮಿತಾ ಅಕ್ಕ ಮಾತನಾಡಿ, ‘ದೇಶದ ಸಂಸ್ಕತಿ, ರೀತಿ–ನೀತಿ, ಸಮಾಜ ಹಾಗೂ ಕುಟಂಬದಲ್ಲಿ ಶಾಂತಿ ಸೌಹಾರ್ದತೆ ನೆಲೆಗೊಳ್ಳುವಂತೆ ಮಾಡುವ ಯೋಧರು ನಾವಾದಾಗ ಮಾತ್ರ ದೇಶ ಸುಭದ್ರವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.</p>.<p>‘ದೇಶವನ್ನು ಕಾಯುತ್ತಿರುವ ಸಹಸ್ರರಾರು ಯೋಧರನ್ನು ನಾವೆಲ್ಲ ಗೌರವಿಸೋಣ. ರಾಷ್ಟ್ರದ ಸುಭದ್ರತೆಗೆ ಪಣ ತೊಡೋಣ’ ಎಂದು ಹೇಳಿದರು.</p>.<p>ಮಾಜಿ ಸೈನಿಕರಾದ ಕೆ.ಎಸ್.ರಾವ್, ಗೋಪಾಲ, ಸಿದ್ದಯ್ಯ ಸ್ವಾಮಿ ಅವರು ಕಾರ್ಗಿಲ್ ಯುದ್ಧದ ಸನ್ನಿವೇಶವನ್ನು ವಿವರಿಸಿದರು.</p>.<p>ಹಿರಿಯ ಪತ್ರಕರ್ತ ಚಂದ್ರಕಾಂತ ಎಂ.ಮಾತನಾಡಿದರು.</p>.<p>ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ 9 ವೀರಯೋಧರು, 1971 ರ ಯುದ್ಧದಲ್ಲಿ ಭಾಗವಹಿಸಿದ್ದ ನಾಲ್ವರು ವೀರಯೋಧರು, ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಎಂಟು ಯೋಧರನ್ನೊಳಗೊಂಡು ಒಟ್ಟು 21 ಸೈನಿಕರನ್ನು ಸನ್ಮಾನಿಸಲಾಯಿತು.</p>.<p>ನಗರಸಭೆ ಸದಸ್ಯ ಜಯಣ್ಣ, ಮಾಜಿ ಸದಸ್ಯ ಶಿವಮೂರ್ತಿ ಹಾಗೂ ವಕೀಲ ದೇವಣ್ಣ ನಾಯಕ ಇದ್ದರು.</p>.<p>ಬಿ.ಕೆ.ಶಾರದಾ ಸ್ವಾಗತಿಸಿದರು. ಮಹಾಲಕ್ಷ್ಮಿ ಪ್ರಾರ್ಥನೆ ಗೀತೆ ಹಾಡಿದರು. ರಂಜಿತ್ಕುಮಾರ ನಿರೂಪಿಸಿದರು.</p>.<p>Highlights - ಸಂಘಕ್ಕೆ ಜಾಗ ಕೇಳಿದ ಮಾಜಿ ಸೈನಿಕರು ಧ್ವಜ ಹಿಡಿದು ಮಾಜಿ ಸೈನಿಕರಿಗೆ ಗೌರವ ಸಲ್ಲಿಕೆ ಸೈನಿಕರ ಪತ್ನಿಗೂ ಗೌರವ ಸಲ್ಲಿಸಿದ ಅಕ್ಕ ಸ್ಮಿತಾ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಯಚೂರು: ‘ಮಳೆ, ಬಿಸಿಲು ಎನ್ನದೇ ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲೂ ದೇಶದ ಗಡಿ ಕಾಯುತ್ತಿರುವ ಸೈನಿಕರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಈ ದಿಸೆಯಲ್ಲಿ ಬದ್ಧತೆಯನ್ನು ಪ್ರದರ್ಶಿಸಿದೆ’ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು.</p>.<p>ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಗಿಲ್ ವಿಜಯೋತ್ಸವ ಹಾಗೂ ನಿವೃತ್ತ ಸೈನಿಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘1999ರ ಜುಲೈ 26ರಂದು ದೇಶದ ಸೈನಿಕರು ಆರು ತಿಂಗಳ ಕಾಲ ಹೋರಾಡಿದರು. ಪಾಕಿಸ್ತಾನದ ಸೈನ್ಯವನ್ನು ಹಿಮ್ಮೆಟ್ಟಿಸಿ ವಿಜಯ ಪತಾಕೆ ಹಾರಿಸಿದರು. ಯುದ್ಧದಲ್ಲಿ ವೀರಮರಣ ಹೊಂದಿದ ಸೈನಿಕರನ್ನು ದೇಶದ ಜನ ಗೌರವಿಸಿದ್ದಾರೆ. ದಾನ ಧರ್ಮದ ಮೂಲಕ ಅವರಿಗೆ ನೆರವಾಗಿದ್ದಾರೆ. ಪ್ರೋತ್ಸಾಹಿಸಿದ್ದಾರೆ’ ಎಂದು ತಿಳಿಸಿದರು.</p>.<p>ಮುಖ್ಯ ಅತಿಥಿಯಾಗಿದ್ದ ಶಾಸಕ ಶಿವರಾಜ ಪಾಟೀಲ ಮಾತನಾಡಿ, ‘ಹವಾಮಾನ ವೈಪರೀತ್ಯದ ಮಧ್ಯೆಯೂ ದೇಶದ ಯೋಧರು ಕೆಚ್ಚೆದೆಯಿಂದ ಹೋರಾಡಿದರು. ಪಾಕಿಸ್ತಾನದ ಸೈನಿಕರನ್ನು ಮತ್ತೊಮ್ಮೆ ಭಾರತದ ನೆಲದತ್ತ ನೋಡದಂತೆ ಅಟ್ಟಿಸಿದ್ದಾರೆ’ ಎಂದರು.</p>.<p>‘ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಬಂದಿದೆ. ಸಂಸ್ಥೆ ಹಾಗೂ ಸಂಸ್ಥೆಯನ್ನು ನಡೆಸಿಕೊಂಡು ಹೊರಟಿರುವ ಅಕ್ಕ ಸ್ಮಿತಾ ಅವರಿಗೆ ಚಿರಋಣಿಯಾಗಿದ್ದೇವೆ’ ಎಂದು ಹೇಳಿದರು.</p>.<p>ಸ್ಮಿತಾ ಅಕ್ಕ ಮಾತನಾಡಿ, ‘ದೇಶದ ಸಂಸ್ಕತಿ, ರೀತಿ–ನೀತಿ, ಸಮಾಜ ಹಾಗೂ ಕುಟಂಬದಲ್ಲಿ ಶಾಂತಿ ಸೌಹಾರ್ದತೆ ನೆಲೆಗೊಳ್ಳುವಂತೆ ಮಾಡುವ ಯೋಧರು ನಾವಾದಾಗ ಮಾತ್ರ ದೇಶ ಸುಭದ್ರವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.</p>.<p>‘ದೇಶವನ್ನು ಕಾಯುತ್ತಿರುವ ಸಹಸ್ರರಾರು ಯೋಧರನ್ನು ನಾವೆಲ್ಲ ಗೌರವಿಸೋಣ. ರಾಷ್ಟ್ರದ ಸುಭದ್ರತೆಗೆ ಪಣ ತೊಡೋಣ’ ಎಂದು ಹೇಳಿದರು.</p>.<p>ಮಾಜಿ ಸೈನಿಕರಾದ ಕೆ.ಎಸ್.ರಾವ್, ಗೋಪಾಲ, ಸಿದ್ದಯ್ಯ ಸ್ವಾಮಿ ಅವರು ಕಾರ್ಗಿಲ್ ಯುದ್ಧದ ಸನ್ನಿವೇಶವನ್ನು ವಿವರಿಸಿದರು.</p>.<p>ಹಿರಿಯ ಪತ್ರಕರ್ತ ಚಂದ್ರಕಾಂತ ಎಂ.ಮಾತನಾಡಿದರು.</p>.<p>ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ 9 ವೀರಯೋಧರು, 1971 ರ ಯುದ್ಧದಲ್ಲಿ ಭಾಗವಹಿಸಿದ್ದ ನಾಲ್ವರು ವೀರಯೋಧರು, ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಎಂಟು ಯೋಧರನ್ನೊಳಗೊಂಡು ಒಟ್ಟು 21 ಸೈನಿಕರನ್ನು ಸನ್ಮಾನಿಸಲಾಯಿತು.</p>.<p>ನಗರಸಭೆ ಸದಸ್ಯ ಜಯಣ್ಣ, ಮಾಜಿ ಸದಸ್ಯ ಶಿವಮೂರ್ತಿ ಹಾಗೂ ವಕೀಲ ದೇವಣ್ಣ ನಾಯಕ ಇದ್ದರು.</p>.<p>ಬಿ.ಕೆ.ಶಾರದಾ ಸ್ವಾಗತಿಸಿದರು. ಮಹಾಲಕ್ಷ್ಮಿ ಪ್ರಾರ್ಥನೆ ಗೀತೆ ಹಾಡಿದರು. ರಂಜಿತ್ಕುಮಾರ ನಿರೂಪಿಸಿದರು.</p>.<p>Highlights - ಸಂಘಕ್ಕೆ ಜಾಗ ಕೇಳಿದ ಮಾಜಿ ಸೈನಿಕರು ಧ್ವಜ ಹಿಡಿದು ಮಾಜಿ ಸೈನಿಕರಿಗೆ ಗೌರವ ಸಲ್ಲಿಕೆ ಸೈನಿಕರ ಪತ್ನಿಗೂ ಗೌರವ ಸಲ್ಲಿಸಿದ ಅಕ್ಕ ಸ್ಮಿತಾ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>