ಕೊಳವೆ ಭಾವಿಯಲ್ಲಿ ಆರ್ಸೆನಿಕ್ಯುಕ್ತ ನೀರು ಸಿಗುತ್ತಿರುವುದರಿಂದ ಕುಡಿಯಲು ಯೋಗ್ಯವಿಲ್ಲ. ಕುಡಿವ ನೀರಿಗಾಗಿ ಪರಿತಪಿಸುವಂತಾಗಿದೆ. ಕೊಡಗಳನ್ನು ಹಿಡಿದುಕೊಂಡು ಹಟ್ಟಿ ಚಿನ್ನದ ಗಣಿ ಕಾರ್ಮಿಕರು ವಾಸವಿರುವ ಕಾಲೋನಿಗಳಲ್ಲಿ ಜನರು ಅಲೆಯುವುದು ಕಂಡು ಬರುತ್ತದೆ. ಕೆಲವು ಕಡೆ ಕಂಪನಿ ಅಳವಡಿಸಿದ ಸಾರ್ವಜನಿಕ ನಳಗಳು ಇವೆ. ಇದರಿಂದ ಒಂದು ಕುಟುಂಬಕ್ಕೆ ಕೇವಲ ಒಂದು ಅಥವ ಎರಡು ಕೊಡವಷ್ಟೆ ನೀರು ಸಿಗುತ್ತದೆ. ಸುಮಾರು ಮೂರು ಕೀ ಮೀ ದೂರದಿಂದ ನೀರು ಹೊತ್ತು ತರಬೇಕು ಎಂದು ಶರಣುಬಸವ, ನಿಂಗಪ್ಪ ಮಲ್ಲಮ್ಮ ದುರುಗಮ್ಮ, ತಮ್ಮ ಅಳಲನ್ನು ತೋಡಿಕೊಂಡರು.