<p><strong>ಮಸ್ಕಿ:</strong> ಹಿಂದೂ–ಮುಸ್ಲಿಂ ಭಾವೈಕ್ಯದ ಸಂಗಮ ಎಂದೇ ಪ್ರಖ್ಯಾತಿ ಪಡೆದಿರುವ ತಾಲ್ಲೂಕಿನ ಹಸಮಕಲ್ ಗ್ರಾಮದಲ್ಲಿ ಗುರುವಾರ ಹಜರತ್ ಮಹ್ಮದ್ ಷರೀಫ್ ಖಾನ್ ಸಾಹೇಬ್ ದರ್ಗಾದ ಉರುಸ್ ಅದ್ದೂರಿಯಾಗಿ ಜರುಗಿತು.</p>.<p>ಉರುಸ್ನ ನಿಮಿತ್ತ ಬೆಳಿಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸಂತೆಕೆಲ್ಲೂರಿನ ಘನಮಠದಿಂದ ಆಗಮಿಸಿದ ಗಂಧವನ್ನು ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಭಕ್ತಾದಿಗಳು ಮೆರವಣಿಗೆ ಮೂಲಕ ಖಾನ್ ಸಾಹೇಬರ ಕರ್ತೃ ಗದ್ದುಗೆಗೆ ತಂದರು.</p>.<p>ಸಂತೆಕೆಲ್ಲೂರಿನ ಮಹಾಂತ ಶಿವಾಚಾರ್ಯರು, ಮಸ್ಕಿಯ ಶೇಖ್ ಖಾಜಾ ಮೊಹಿನುದ್ದೀನ್ ಖಾಜಿ ಸಮ್ಮುಖದಲ್ಲಿ ಗಲೀಫ್, ಗಂಧ, ಹೂ ಸಮರ್ಪಿಸಿ ಧ್ವಜಾರೋಹಣ ನೆರವೇರಿಸಲಾಯಿತು.</p>.<p>ಮಹಾಂತ ಶಿವಾಚಾರ್ಯರು ಮಾತನಾಡಿ,‘ಮನುಷ್ಯರೆಲ್ಲರೂ ಒಂದೇ ಎಂದು ಶರಣರು, ಸೂಫಿಗಳು ಸಾರುತ್ತ ಬಂದಿದ್ದಾರೆ. ಅದರಂತೆ ಗಂಧ, ಉರುಸ್ ಎನ್ನುವುದು ವಿಶೇಷವಾದ ಜಾತ್ರೆಯಾಗಿದೆ’ ಎಂದರು.</p>.<p>ಶೇಖ್ ಖಾಜಾ ಮೊಹಿನುದ್ದೀನ್ ಖಾಜಿ ಮಾತನಾಡಿ,‘ಹಿಂದೂ–ಮುಸ್ಲಿಂ ನೆಪದಲ್ಲಿ ಅನೇಕರು ಧರ್ಮದ ವಿಷಬೀಜ ಬಿತ್ತಿ, ಜನರ ಮಧ್ಯೆ ಜಗಳ ತಂದಿಟ್ಟು ತಮಾಷೆ ನೋಡುತ್ತಾರೆ. ಇಂಥ ಸಂದರ್ಭದಲ್ಲಿ ನಮ್ಮ ತಾಲ್ಲೂಕಿನ ಹಸಮಕಲ್ ಗ್ರಾಮದ ಉರುಸ್ ಹಿಂದೂ–ಮುಸ್ಲಿಂ ಭಾವೈಕ್ಯದ ಸಂಗಮವೆಂದೇ ಪ್ರಖ್ಯಾತಿ ಪಡೆದಿದೆ’ ಎಂದರು.</p>.<p>ಉರುಸ್ ಅಂಗವಾಗಿ ದುರ್ಗಾದೇವಿ ಭಜನಾ ಮಂಡಳಿ ಸೇರಿದಂತೆ ಇತರ ಭಜನಾ ಮಂಡಳಿಗಳಿಂದ ಬುಧವಾರ ಅಹೋರಾತ್ರಿ ಭಜನಾ ಕಾರ್ಯಕ್ರಮ ನಡೆಯಿತು. ನೂರಾರು ಭಕ್ತರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಸ್ಕಿ:</strong> ಹಿಂದೂ–ಮುಸ್ಲಿಂ ಭಾವೈಕ್ಯದ ಸಂಗಮ ಎಂದೇ ಪ್ರಖ್ಯಾತಿ ಪಡೆದಿರುವ ತಾಲ್ಲೂಕಿನ ಹಸಮಕಲ್ ಗ್ರಾಮದಲ್ಲಿ ಗುರುವಾರ ಹಜರತ್ ಮಹ್ಮದ್ ಷರೀಫ್ ಖಾನ್ ಸಾಹೇಬ್ ದರ್ಗಾದ ಉರುಸ್ ಅದ್ದೂರಿಯಾಗಿ ಜರುಗಿತು.</p>.<p>ಉರುಸ್ನ ನಿಮಿತ್ತ ಬೆಳಿಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸಂತೆಕೆಲ್ಲೂರಿನ ಘನಮಠದಿಂದ ಆಗಮಿಸಿದ ಗಂಧವನ್ನು ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಭಕ್ತಾದಿಗಳು ಮೆರವಣಿಗೆ ಮೂಲಕ ಖಾನ್ ಸಾಹೇಬರ ಕರ್ತೃ ಗದ್ದುಗೆಗೆ ತಂದರು.</p>.<p>ಸಂತೆಕೆಲ್ಲೂರಿನ ಮಹಾಂತ ಶಿವಾಚಾರ್ಯರು, ಮಸ್ಕಿಯ ಶೇಖ್ ಖಾಜಾ ಮೊಹಿನುದ್ದೀನ್ ಖಾಜಿ ಸಮ್ಮುಖದಲ್ಲಿ ಗಲೀಫ್, ಗಂಧ, ಹೂ ಸಮರ್ಪಿಸಿ ಧ್ವಜಾರೋಹಣ ನೆರವೇರಿಸಲಾಯಿತು.</p>.<p>ಮಹಾಂತ ಶಿವಾಚಾರ್ಯರು ಮಾತನಾಡಿ,‘ಮನುಷ್ಯರೆಲ್ಲರೂ ಒಂದೇ ಎಂದು ಶರಣರು, ಸೂಫಿಗಳು ಸಾರುತ್ತ ಬಂದಿದ್ದಾರೆ. ಅದರಂತೆ ಗಂಧ, ಉರುಸ್ ಎನ್ನುವುದು ವಿಶೇಷವಾದ ಜಾತ್ರೆಯಾಗಿದೆ’ ಎಂದರು.</p>.<p>ಶೇಖ್ ಖಾಜಾ ಮೊಹಿನುದ್ದೀನ್ ಖಾಜಿ ಮಾತನಾಡಿ,‘ಹಿಂದೂ–ಮುಸ್ಲಿಂ ನೆಪದಲ್ಲಿ ಅನೇಕರು ಧರ್ಮದ ವಿಷಬೀಜ ಬಿತ್ತಿ, ಜನರ ಮಧ್ಯೆ ಜಗಳ ತಂದಿಟ್ಟು ತಮಾಷೆ ನೋಡುತ್ತಾರೆ. ಇಂಥ ಸಂದರ್ಭದಲ್ಲಿ ನಮ್ಮ ತಾಲ್ಲೂಕಿನ ಹಸಮಕಲ್ ಗ್ರಾಮದ ಉರುಸ್ ಹಿಂದೂ–ಮುಸ್ಲಿಂ ಭಾವೈಕ್ಯದ ಸಂಗಮವೆಂದೇ ಪ್ರಖ್ಯಾತಿ ಪಡೆದಿದೆ’ ಎಂದರು.</p>.<p>ಉರುಸ್ ಅಂಗವಾಗಿ ದುರ್ಗಾದೇವಿ ಭಜನಾ ಮಂಡಳಿ ಸೇರಿದಂತೆ ಇತರ ಭಜನಾ ಮಂಡಳಿಗಳಿಂದ ಬುಧವಾರ ಅಹೋರಾತ್ರಿ ಭಜನಾ ಕಾರ್ಯಕ್ರಮ ನಡೆಯಿತು. ನೂರಾರು ಭಕ್ತರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>