ಕವಿತಾಳ: ‘ಶೌಚಾಲಯವನ್ನು ಕಡ್ಡಾಯವಾಗಿ ಬಳಸುವ ಮೂಲಕ ಸ್ವಚ್ಛತೆ ಕಾಪಾಡಲು ಪ್ರತಿಯೊಬ್ಬರೂ ಸಹಕರಿಸಬೇಕು’ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ಮತ್ತು ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಪಟ್ಟಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಪಾಕ್ಷಿಕ ಆಂದೋಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಾರದಲ್ಲಿ ಎರಡು ಗಂಟೆಯ ಅವಧಿಯನ್ನು ಸ್ವಚ್ಛತೆ ಕಾಪಾಡಲು ಬಳಸುವುದಾಗಿ ಮತ್ತು ಸ್ವತ ತಾವು ಪರಿಸರವನ್ನು ಮಲೀನಗೊಳಿಸುವುದಿಲ್ಲ ಹಾಗೂ ಮಲೀನಗೊಳಿಸಲು ಬಿಡುವುದಿಲ್ಲ’ ಎಂದು ಸಿಬ್ಬಂದಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಡಾ.ಅಮೃತ್ ರಾಠೋಡ್, ಡಾ.ಬಸವರಾಜ, ಡಾ.ಮಲ್ಲನಗೌಡ, ಆರೋಗ್ಯ ನಿರೀಕ್ಷಣಾಧಿಕಾರಿ ಪ್ರದೀಪ್ ಕುಮಾರ, ಸಿಬ್ಬಂದಿ ಸುಮಾ, ನೀತಾ, ರಾಜೇಶ್ವರಿ, ಸೌಭಾಗ್ಯ, ಶಿವಲಿಂಗಮ್ಮ ಮತ್ತು ಶಿವಕುಮಾರ ಮತ್ತಿತರರು ಉಪಸ್ಥಿತರಿದ್ದರು.