ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಯಚೂರು ವಿಶ್ವವಿದ್ಯಾಲಯವೆಂದು ಸರ್ಕಾರ ಘೋಷಿಸಿದ ಬಳಿಕ ಮೂರು ಜನ ವಿಶೇಷ ಅಧಿಕಾರಿಗಳ ನೇಮಕ ಮಾಡಲಾಗಿದೆ. ಆದರೆ, ವಿಶ್ವವಿದ್ಯಾಲಯ ಮಾತ್ರ ಆರಂಭಗೊಂಡಿಲ್ಲ. ಈ ವರ್ಷವೂ ವಿಶ್ವವಿದ್ಯಾಲಯ ಆರಂಭಗೊಳ್ಳುವುದು ಅನುಮಾನ ಮೂಡುತ್ತಿದೆ. ರಾಯಚೂರು ವಿಶ್ವವಿದ್ಯಾಲಯದ ಬೆಳವಣಿಗೆ ಗಮನಿಸಿದರೆ ರಾಜ್ಯ ಸರ್ಕಾರ ಪಂಚವಾರ್ಷಿಕ ಯೋಜನೆಯಂತಾಗಿದೆ ಎಂದು ಟೀಕಿಸಿದರು.