ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಯಚೂರು, ದೇವದುರ್ಗ, ಸಿಂಧನೂರು, ಮಾನ್ವಿ ಈ ನಾಲ್ಕು ತಾಲ್ಲೂಕುಗಳು ಕೃಷ್ಣಾ ಮತ್ತು ತುಂಗಭದ್ರಾ ನದಿಯಿಂದ ಅಕ್ರಮ ಮರಳು ಗಣಿಗಾರಿಕೆ ನಡೆದಿದೆ. ಜೊಳದಹಡ್ಗಿಮ, ಚಿಕ್ಕರಾಯಕುಂಪಿ, ಕರ್ಕಿಹಳ್ಳಿ, ಅರಷಿಣಗಿ ಗ್ರಾಮದ ಸ್ಟಾಕ್ ಯಾರ್ಡಗಳಲ್ಲಿ ಗುತ್ತಿಗೆದಾರರು ಒಂದು ಲಾರಿಗೆ 15 ಟನ್ಗೆ ರಾಜಧನ ಕೊಟ್ಟು ಆ ಲಾರಿಗೆ ಅರ್ಧ ಟ್ರಿಪ್ಪು ಮರಳು 15 ಟನ್ ತುಂಬಿದ ವೇಬ್ರಿಜ್ ತೂಗಿಸಿ ಆನಂತರ ಅದೇ ಲಾರಿಗೆ ಸ್ಟಾಕ್ ಯಾರ್ಡ್ನಲ್ಲಿ 20 ಟನ್ ಮರಳು ಹೆಚ್ಚುವರಿ ತುಂಬುತ್ತಿದ್ದಾರೆ.