<p><strong>ರಾಯಚೂರು:</strong> ಬಾನಂಗಳದಲ್ಲಿ ಚಂದಿರ ಬೆಳಂದಿಗಳು ಚೆಲ್ಲುತ್ತಿದ್ದ ಹೊತ್ತಿನಲ್ಲೇ ಬಿಸಿಲ ನಾಡಿನ ನೆಲದಲ್ಲಿ ಅದ್ದೂರಿಯಾಗಿ ನಡೆಯುತ್ತಿದ್ದ ರಾಯಚೂರು ಜಿಲ್ಲಾ ಉತ್ಸವದ ಮುಖ್ಯ ವೇದಿಕೆಗೆ ಶನಿವಾರ ರಾತ್ರಿ ಗಾಯಕ ವಿಜಯ ಪ್ರಕಾಶ್ ಪ್ರವೇಶಿಸುತ್ತಿದ್ದಂತೆಯೇ ವರ್ಣ ರಂಜಿತ ಸಂಗೀತ ಲೋಕ ಅನಾವರಣಗೊಂಡಿತು.</p>.<p>ವಿಜಯ ಪ್ರಕಾಶ್ ಅವರು ಮಧುರ ಗಾನಗಳ ಮೂಲಕ ಶೋತೃಗಳನ್ನು ಸೆಳೆದಿಟ್ಟುಕೊಂಡು ಸಂಗೀತದ ರಸದೌತಣ ನೀಡಿದರು. ಪ್ರೇಮಗೀತೆಗಳು ಯುವ ಸಮೂಹ ಹಾಗೂ ವಯಸ್ಕರನ್ನೂ ರಂಜಿಸಿದವು.</p>.<p>‘ಸಿಂಗಾರ ಸಿರಿಯೇ....’ (ಕಾಂತಾರ), ‘ಬೊಂಬೆ ಹೇಳುತೈತೆ...’ (ರಾಜಕುಮಾರ), ‘ಬೆಳಗೆದ್ದು ಯಾರ ಮುಖವ ನಾನು ನೋಡಿದೆ.....’ (ಕಿರಿಕ್ ಪಾರ್ಟಿ), ‘ಏನಮ್ಮಿ ಏನಮ್ಮಿ...’ (ಮುಗುಳು ನಗೆ) ಹಾಗೂ ‘ಮಾಂಗಲ್ಯಂ ತಂತು ನಾನೇನ’ (ಸೀತಾರಾಮ ಕಲ್ಯಾಣ) ಹಾಡುಗಳು ವಿಜಯ ಪ್ರಕಾಶ್ ಅವರ ಧ್ವನಿಯಲ್ಲೇ ಮೂಡಿಬಂದವು.</p>.<p class="Subhead">ಆಕರ್ಷಕ ನೃತ್ಯ ಪ್ರದರ್ಶನ: ಆಲ್ಬಿಕೆ ತಂಡ ಹಾಗೂ ಎಂ.ಜೆ–5 ತಂಡದ ಕಲಾವಿದರು ಆಕರ್ಷಕ ನೃತ್ಯ ಪ್ರದರ್ಶನದ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಯುವಕ, ಯುವತಿಯರು ಸಿಳ್ಳೆ, ಕೇಕೆ ಹಾಕಿ ಕಲಾವಿದರಲ್ಲಿ ಹುರುಪು ತುಂಬಿದರು. ಉಳಿದವರು ಕರಡತಾನದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ಇದಕ್ಕೂ ಮೊದಲು ರಾಯಚೂರು ಜಿಲ್ಲೆಯ 48 ಕಲಾವಿದರು ಸಂಗೀತ, ನೃತ್ಯ ಗಾಯನ ಪ್ರಸ್ತುತಪಡಿಸಿದರು.</p>.<p>ಕಲಬುರಗಿಯ ಜೈ ಕುಮಾರ ಮಡಿವಾಳ ಅವರು ಮೂಗಿನಿಂದ ಕೊಳಲು ನುಡಿಸಿದರು. ವಚನ, ತತ್ವಪದ, ಭಕ್ತಿಗೀತೆ, ಸುಗಮ ಸಂಗೀತ, ಹಿಂದೂಸ್ತಾನಿ ಸಂಗೀತ, ಏಕತಾರಿ ಪದ, ವಯಲಿನ್ ವಾದನ, ಭರತನಾಟ್ಯ, ಸಮೂಹ ನೃತ್ಯ ಕಾರ್ಯಕ್ರಮಗಳು ನಡೆದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು:</strong> ಬಾನಂಗಳದಲ್ಲಿ ಚಂದಿರ ಬೆಳಂದಿಗಳು ಚೆಲ್ಲುತ್ತಿದ್ದ ಹೊತ್ತಿನಲ್ಲೇ ಬಿಸಿಲ ನಾಡಿನ ನೆಲದಲ್ಲಿ ಅದ್ದೂರಿಯಾಗಿ ನಡೆಯುತ್ತಿದ್ದ ರಾಯಚೂರು ಜಿಲ್ಲಾ ಉತ್ಸವದ ಮುಖ್ಯ ವೇದಿಕೆಗೆ ಶನಿವಾರ ರಾತ್ರಿ ಗಾಯಕ ವಿಜಯ ಪ್ರಕಾಶ್ ಪ್ರವೇಶಿಸುತ್ತಿದ್ದಂತೆಯೇ ವರ್ಣ ರಂಜಿತ ಸಂಗೀತ ಲೋಕ ಅನಾವರಣಗೊಂಡಿತು.</p>.<p>ವಿಜಯ ಪ್ರಕಾಶ್ ಅವರು ಮಧುರ ಗಾನಗಳ ಮೂಲಕ ಶೋತೃಗಳನ್ನು ಸೆಳೆದಿಟ್ಟುಕೊಂಡು ಸಂಗೀತದ ರಸದೌತಣ ನೀಡಿದರು. ಪ್ರೇಮಗೀತೆಗಳು ಯುವ ಸಮೂಹ ಹಾಗೂ ವಯಸ್ಕರನ್ನೂ ರಂಜಿಸಿದವು.</p>.<p>‘ಸಿಂಗಾರ ಸಿರಿಯೇ....’ (ಕಾಂತಾರ), ‘ಬೊಂಬೆ ಹೇಳುತೈತೆ...’ (ರಾಜಕುಮಾರ), ‘ಬೆಳಗೆದ್ದು ಯಾರ ಮುಖವ ನಾನು ನೋಡಿದೆ.....’ (ಕಿರಿಕ್ ಪಾರ್ಟಿ), ‘ಏನಮ್ಮಿ ಏನಮ್ಮಿ...’ (ಮುಗುಳು ನಗೆ) ಹಾಗೂ ‘ಮಾಂಗಲ್ಯಂ ತಂತು ನಾನೇನ’ (ಸೀತಾರಾಮ ಕಲ್ಯಾಣ) ಹಾಡುಗಳು ವಿಜಯ ಪ್ರಕಾಶ್ ಅವರ ಧ್ವನಿಯಲ್ಲೇ ಮೂಡಿಬಂದವು.</p>.<p class="Subhead">ಆಕರ್ಷಕ ನೃತ್ಯ ಪ್ರದರ್ಶನ: ಆಲ್ಬಿಕೆ ತಂಡ ಹಾಗೂ ಎಂ.ಜೆ–5 ತಂಡದ ಕಲಾವಿದರು ಆಕರ್ಷಕ ನೃತ್ಯ ಪ್ರದರ್ಶನದ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಯುವಕ, ಯುವತಿಯರು ಸಿಳ್ಳೆ, ಕೇಕೆ ಹಾಕಿ ಕಲಾವಿದರಲ್ಲಿ ಹುರುಪು ತುಂಬಿದರು. ಉಳಿದವರು ಕರಡತಾನದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ಇದಕ್ಕೂ ಮೊದಲು ರಾಯಚೂರು ಜಿಲ್ಲೆಯ 48 ಕಲಾವಿದರು ಸಂಗೀತ, ನೃತ್ಯ ಗಾಯನ ಪ್ರಸ್ತುತಪಡಿಸಿದರು.</p>.<p>ಕಲಬುರಗಿಯ ಜೈ ಕುಮಾರ ಮಡಿವಾಳ ಅವರು ಮೂಗಿನಿಂದ ಕೊಳಲು ನುಡಿಸಿದರು. ವಚನ, ತತ್ವಪದ, ಭಕ್ತಿಗೀತೆ, ಸುಗಮ ಸಂಗೀತ, ಹಿಂದೂಸ್ತಾನಿ ಸಂಗೀತ, ಏಕತಾರಿ ಪದ, ವಯಲಿನ್ ವಾದನ, ಭರತನಾಟ್ಯ, ಸಮೂಹ ನೃತ್ಯ ಕಾರ್ಯಕ್ರಮಗಳು ನಡೆದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>