ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ದಸ್ತಗೀರಸಾಬ್ ದಿನ್ನಿ ಮಾತನಾಡಿ, ಕುವೆಂಪು ಅವರಿಗೆ ಕನ್ನಡ ನಾಟಕ ಸಾಹಿತ್ಯದಲ್ಲಿ ಪ್ರತ್ಯೇಕವಾದ ಸ್ಥಾನವಿದೆ. ಅವರು ನಾಟಕ ಸಾಹಿತ್ಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದರು. ಅವರ ಬಹುಪಾಲು ನಾಟಕಗಳ ವಸ್ತು ಪುರಾಣಗಳದ್ದಾಗಿದ್ದರೂ ಅವುಗಳನ್ನು ಸಮಕಾಲೀನವಾಗಿಸಿ ನೋಡಿದ್ದಾರೆ. ಈ ಕಾರಣಕ್ಕಾಗಿಯೇ ಅವರು ಯಾವತ್ತಿಗೂ ವರ್ತಮಾನದ ಶ್ರೇಷ್ಠ ಬರಹಗಾರರಾಗಿಯೇ ಉಳಿದಿದ್ದಾರೆ ಎಂದು ಹೇಳಿದರು.