ಸಿಂಧನೂರು: ತಾಲ್ಲೂಕಿನ ತುರ್ವಿಹಾಳದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಸೋಮವಾರ ಗ್ರಾಮಸ್ಥರು ಖಾಲಿ ಕೊಡಗಳೊಂದಿಗೆ ಮೆರವಣಿಗೆ ಮಾಡಿ ಪಟ್ಟಣ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದರು.
‘ನೀರಿನ ಸಮಸ್ಯೆ ಕುರಿತು ಹಲವಾರು ಬಾರಿ ಪಂಚಾಯತಿ ಅಧ್ಯಕ್ಷ ಮರಿಯಪ್ಪ ನಾಯಕ ಮತ್ತು ಮುಖ್ಯಾಧಿಕಾರಿ ಹಂಪಯ್ಯ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು 12ನೇ ವಾರ್ಡ್ ಸದಸ್ಯ ಶರಣೇಗೌಡ ದೇವರಮನಿ ಹೇಳಿದರು.
ಅಧ್ಯಕ್ಷ ಮತ್ತು ಮುಖ್ಯಾಧಿಕಾರಿಯನ್ನು ಮಹಿಳೆಯರು ತರಾಟೆಗೆ ತೆಗೆದುಕೊಂಡರು. ‘ನೀರಿನ ಸಮಸ್ಯೆ ತೀವ್ರತೆ ಅರ್ಥವಾಗಿದ್ದು, ಆದಷ್ಟು ಶೀಘ್ರ ಕ್ರಮಕೈಗೊಳ್ಳುವುದಾಗಿ’ ಅಧ್ಯಕ್ಷ ಮರಿಯಪ್ಪ ನಾಯಕ ಭರವಸೆ ನೀಡಿದರು.