‘ಮಳೆಗಾಲದಲ್ಲಿ ಬಸಿ ನೀರು ಸರಾಗವಾಗಿ ಹರಿದು ಮುಂದೆ ಹೋಗಲಿ ಎನ್ನುವ ಕಾರಣಕ್ಕೆ ನಿರ್ಮಿಸಿದ ನಾಲೆಯಲ್ಲಿ ಹೂಳು ತೆಗೆಯಲು ಮತ್ತು ದುರಸ್ತಿಗೆ ಸರ್ಕಾರ ಲಕ್ಷಾಂತರ ಮೊತ್ತ ಭರಿಸಿದೆ. ಇದೀಗ ನಾಲೆಗೆ ಮಣ್ಣು ಭರ್ತಿ ಮಾಡಿದಲ್ಲಿ ಅಕ್ಕಪಕ್ಕದ ಸಣ್ಣ ರೈತರ ಜಮೀನುಗಳು ಹಾಳಾಗುತ್ತವೆ. ಹೀಗಾಗಿ ತಹಶೀಲ್ದಾರರು ಮತ್ತು ಸಂಬ್ಬಂದಪಟ್ಟ ಅಧಿಕಾರಿಗಳು ಶೀಘ್ರ ಗಮನಹರಿಸಬೇಕು’ ಎಂದು ರೈತರಾದ ಮಲ್ಲಯ್ಯ ಗೋರ್ಕಲ್, ಈರಯ್ಯಸ್ವಾಮಿ, ವರದಪ್ಪ, ವೀರಯ್ಯ ಪರಂಗಿ ಒತ್ತಾಯಿಸಿದ್ದಾರೆ.