ಸ್ಥಳೀಯರು ಇದನ್ನು ‘ಬಚ್ಪನ್ ಬಚಾವೊ’ ಆಂದೋಲನದ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಆಂದೋಲನದ ಸದಸ್ಯರು ಕಳೆದೊಂದು ವಾರದಿಂದಲೂ ಮಕ್ಕಳ ಚಲನವಲನಗಳನ್ನು ಗಮನಿಸಿದ್ದರು. ಮಕ್ಕಳ ರಕ್ಷಣಾ ಘಟಕ, ಕಾರ್ಮಿಕ ಇಲಾಖೆ ಅಧಿಕಾರಿಗಳ ಸಹಯೋಗದಲ್ಲಿ ಶನಿವಾರ ದಾಳಿ ನಡೆಸಿ ರಕ್ಷಣೆ ಮಾಡಿದರು. ದಾಳಿ ಸಂದರ್ಭ ಕೆಲಸ ಮಾಡಿಸುತ್ತಿದ್ದ ಮೇಸ್ತ್ರಿ ಹಾಗೂ ಗುತ್ತಿಗೆದಾರ ಪರಾರಿ ಆಗಿದ್ದಾರೆ.