ಪ್ರಥಮ ದರ್ಜೆ ಸಹಾಯಕ ಕೇಶವ್, ದ್ವಿತೀಯ ದರ್ಜೆ ಸಹಾಯಕ ಪ್ರಮೋದ್ ಹಾಗೂ ಸೈಟ್ ಎಂಜಿನಿಯರ್ ಒಬ್ಬರ ವಾಹನ ಚಾಲಕ ಕಿರಣ್ಕುಮಾರ್ ಬಂಧಿತರು. ಬಿಡದಿ ಹೋಬಳಿಯ ಕೆಂಚನಕುಪ್ಪೆ ಗ್ರಾಮದ ನಿವಾಸಿಯೊಬ್ಬರ ಜಮೀನನ್ನು ಪ್ರಾಧಿಕಾರವು ಹೆದ್ದಾರಿ ವಿಸ್ತರಣೆಗಾಗಿ ವಶಪಡಿಸಿಕೊಂಡಿತ್ತು. ಇದಕ್ಕೆ ಪ್ರಾಧಿಕಾರದಿಂದ ನೀಡಬೇಕಾದ ಪರಿಹಾರ ಧನದ ಬಿಡುಗಡೆಗಾಗಿ ಆರೋಪಿಗಳು ₨1.7 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಸಂತ್ರಸ್ಥರು ಎಸಿಬಿಗೆ ದೂರು ನೀಡಿದ್ದರು. ಅವರ ಸೂಚನೆಯಂತೆ ದೂರುದಾರರು ಆರೋಪಿಗಳಾದ ಕೇಶವ್ ಹಾಗೂ ಪ್ರಮೋದ್ಗೆ ಶನಿವಾರ ₨1 ಲಕ್ಷ ಹಣ ನೀಡಿದ್ದರು. ಅದನ್ನು ಆರೋಪಿಗಳು ಕಾರ್ ಚಾಲಕ ಕಿರಣ್ಕುಮಾರ್ ಬಳಿ ಇರಿಸಿದ್ದರು. ಈ ಸಂದರ್ಭ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದರು.