<p><strong>ಮಾಗಡಿ: ‘</strong>ಕೇವಲ ತೋರ್ಪಡಿಕೆಗೆ ಅಂಬೇಡ್ಕರ್ ಜಯಂತಿ ಆಚರಿಸುವುದು ಬೇಡ’ ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸದಸ್ಯ ದೊಡ್ಡಯ್ಯ ಹೇಳಿದರು.</p>.<p>ಪಟ್ಟಣದ ಬಾಬು ಜಗಜೀವನ ರಾಂ ನಗರದಲ್ಲಿ ಬುಧವಾರ ನಡೆದ ‘ಮಹಾನಾಯಕ’ ನಾಮಫಲಕ ಅನಾವರಣ ಮತ್ತು ಅಂಬೇಡ್ಕರ್ ಜಯಂತಿಗೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>ಮನುವಾದಿಗಳು ದೇಶದ ಮೂಲನಿವಾಸಿಗಳಿಗೆ ಅಸ್ಪೃಶ್ಯತೆಯ ಪಟ್ಟ ಕಟ್ಟಿದರು. ಜಾತೀಯತೆ ಬೆಳೆಸಿದರು. ಶೋಷಿತ ಸಮುದಾಯದ ಯುವಜನರು ಅಂಬೇಡ್ಕರ್, ಬಾಬು ಜಗಜೀವನ ರಾಂ ಸಾವಿತ್ರಿಬಾಯಿ ಫುಲೆ, ಪೆರಿಯಾರ್, ರಾಮ ಮನೋಹರ ಲೋಹಿಯಾ, ದೇವರಾಜು ಅರಸು ಅವರ ಜೀವನಚರಿತ್ರೆ ಓದಿಕೊಳ್ಳಬೇಕು ಎಂದು ಸಲಹೆ ನೀಡಿದರು.</p>.<p>ಪುರಸಭೆ ಮುಖ್ಯಾಧಿಕಾರಿ ಮಹೇಶ್ ಮಾತನಾಡಿ, ದೀನರ ಬಾಳಲ್ಲಿ ಬೆಳಕು ನೀಡಿದವರು ಅಂಬೇಡ್ಕರ್. ಪೂಜೆಗಿಂದ ತತ್ವದ ಆಚರಣೆ ಮುಖ್ಯ ಎಂದರು.</p>.<p>ಜೆ.ಜೆ. ನಗರದ ಮುಖಂಡ ಗೋಪಾಲಕೃಷ್ಣ ಮಾತನಾಡಿ, ಬಡವರು, ಶೋಷಿತರಿಗೆ ಸಹಾಯ ಮಾಡುವ ಮೂಲಕ ಅಂಬೇಡ್ಕರ್ ಹೆಸರನ್ನು ಶಾಶ್ವತಗೊಳಿಸಬೇಕು ಎಂದು ಹೇಳಿದರು.</p>.<p>ಮುಖಂಡ ಶ್ರೀನಿವಾಸ್ ಮಾತನಾಡಿ, ಅಂಬೇಡ್ಕರ್ ಅವರನ್ನು ಎಲ್ಲಾ ಸಮುದಾಯದ ಮನ, ಮನೆಗಳಿಗೆ ತಲುಪಿಸುವ ಕೆಲಸ ಮಾಡಬೇಕಿದೆ ಎಂದರು.</p>.<p>ಮನೋಜ್, ಚಂದ್ರಶೇಖರ, ರಾಜೇಶ್, ಸಾಗರ್, ಸಂಜಯ್, ಮಂಜುನಾಥ, ಶ್ರೀನಿವಾಸ್ ಹಾಗೂ ಜೆ.ಜೆ. ನಗರದ ನಿವಾಸಿಗಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಗಡಿ: ‘</strong>ಕೇವಲ ತೋರ್ಪಡಿಕೆಗೆ ಅಂಬೇಡ್ಕರ್ ಜಯಂತಿ ಆಚರಿಸುವುದು ಬೇಡ’ ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸದಸ್ಯ ದೊಡ್ಡಯ್ಯ ಹೇಳಿದರು.</p>.<p>ಪಟ್ಟಣದ ಬಾಬು ಜಗಜೀವನ ರಾಂ ನಗರದಲ್ಲಿ ಬುಧವಾರ ನಡೆದ ‘ಮಹಾನಾಯಕ’ ನಾಮಫಲಕ ಅನಾವರಣ ಮತ್ತು ಅಂಬೇಡ್ಕರ್ ಜಯಂತಿಗೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>ಮನುವಾದಿಗಳು ದೇಶದ ಮೂಲನಿವಾಸಿಗಳಿಗೆ ಅಸ್ಪೃಶ್ಯತೆಯ ಪಟ್ಟ ಕಟ್ಟಿದರು. ಜಾತೀಯತೆ ಬೆಳೆಸಿದರು. ಶೋಷಿತ ಸಮುದಾಯದ ಯುವಜನರು ಅಂಬೇಡ್ಕರ್, ಬಾಬು ಜಗಜೀವನ ರಾಂ ಸಾವಿತ್ರಿಬಾಯಿ ಫುಲೆ, ಪೆರಿಯಾರ್, ರಾಮ ಮನೋಹರ ಲೋಹಿಯಾ, ದೇವರಾಜು ಅರಸು ಅವರ ಜೀವನಚರಿತ್ರೆ ಓದಿಕೊಳ್ಳಬೇಕು ಎಂದು ಸಲಹೆ ನೀಡಿದರು.</p>.<p>ಪುರಸಭೆ ಮುಖ್ಯಾಧಿಕಾರಿ ಮಹೇಶ್ ಮಾತನಾಡಿ, ದೀನರ ಬಾಳಲ್ಲಿ ಬೆಳಕು ನೀಡಿದವರು ಅಂಬೇಡ್ಕರ್. ಪೂಜೆಗಿಂದ ತತ್ವದ ಆಚರಣೆ ಮುಖ್ಯ ಎಂದರು.</p>.<p>ಜೆ.ಜೆ. ನಗರದ ಮುಖಂಡ ಗೋಪಾಲಕೃಷ್ಣ ಮಾತನಾಡಿ, ಬಡವರು, ಶೋಷಿತರಿಗೆ ಸಹಾಯ ಮಾಡುವ ಮೂಲಕ ಅಂಬೇಡ್ಕರ್ ಹೆಸರನ್ನು ಶಾಶ್ವತಗೊಳಿಸಬೇಕು ಎಂದು ಹೇಳಿದರು.</p>.<p>ಮುಖಂಡ ಶ್ರೀನಿವಾಸ್ ಮಾತನಾಡಿ, ಅಂಬೇಡ್ಕರ್ ಅವರನ್ನು ಎಲ್ಲಾ ಸಮುದಾಯದ ಮನ, ಮನೆಗಳಿಗೆ ತಲುಪಿಸುವ ಕೆಲಸ ಮಾಡಬೇಕಿದೆ ಎಂದರು.</p>.<p>ಮನೋಜ್, ಚಂದ್ರಶೇಖರ, ರಾಜೇಶ್, ಸಾಗರ್, ಸಂಜಯ್, ಮಂಜುನಾಥ, ಶ್ರೀನಿವಾಸ್ ಹಾಗೂ ಜೆ.ಜೆ. ನಗರದ ನಿವಾಸಿಗಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>