<p><strong>ಕುದೂರು:</strong> ಕೊಯ್ಲಿಗೆ ಬಂದ ಅಡಿಕೆ ಕದಿಯಲು ಶನಿವಾರ ರಾತ್ರಿ ಬಿಸ್ಕೂರು ತೋಟಕ್ಕೆ ನುಗ್ಗಿದ ಮೂವರು ಕಳ್ಳರನ್ನು ಗ್ರಾಮಸ್ಥರು ಹಿಡಿದು ಕುದೂರು ಪೊಲೀಸರಿಗೆ ಒಪ್ಪಿಸಿದ್ದಾರೆ.</p>.<p>ಕಳೆದ ಒಂದು ವಾರದಿಂದ ಬಿಸ್ಕೂರು ಮತ್ತು ಕೋಡಿಹಳ್ಳಿ ಗ್ರಾಮಗಳ ಸುತ್ತಮುತ್ತ ಕೋಯ್ಲಿಗೆ ಬಂದ ಅಡಿಕೆ, ಬಾಳೆಗೋನೆಗಳನ್ನು ರಾತ್ರಿ ವೇಳೆ ಕದಿಯಲಾಗುತ್ತಿತ್ತು. ವಾಹನಗಳಲ್ಲಿ ಬಂದು ಬಾಳೆಗೊನೆ, ಅಡಿಕೆ ಕದಿಯುತ್ತಿದ್ದ ಕಳ್ಳರನ್ನು ಹಿಡಿಯಲು ಗ್ರಾಮಸ್ಥರು ರಾತ್ರಿ ಕಾವಲು ಕಾಯುತ್ತಿದ್ದರು.</p>.<p>ಬಿಸ್ಕೂರು ಕೆರೆ ಏರಿ ಹಿಂಭಾಗದ ಕೋಡಿಹಳ್ಳಿ-ಬಿಸ್ಕೂರು ರಸ್ತೆ ಪಕ್ಕದ ಪದ್ಮನಾಭ ಎಂಬುವರ ತೋಟದಲ್ಲಿ ಗ್ರಾಮಸ್ಥರು ಕಳ್ಳರಿಗಾಗಿ ಹೊಂಚು ಹಾಕಿ ಕುಳಿತಿದ್ದರು. ನಿರೀಕ್ಷೆಯಂತೆ ಶನಿವಾರ ತಡರಾತ್ರಿ ತೋಟಕ್ಕೆ ನುಗ್ಗಿದ ಮೂವರು ಕಳ್ಳರನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದರು.</p>.<p>ಬೆಂಗಳೂರು ನಂಬರ್ ಪ್ಲೇಟ್ ಹೊಂದಿದ (ಕೆಎ 04 ಎಂಜೆಡ್ 0017)ಕಾರಿನಲ್ಲಿ ಬಂದಿದ್ದ ಅಡಿಕೆ ಕಳ್ಳರ ಬಳಿ ಗೋಣಿ ಚೀಲ, ಅಡಿಕೆ ಕೊಯ್ಯುವ ಜವಳಿ ಕೋಲು ಪತ್ತೆಯಾಗಿವೆ. ಮೂವರನ್ನು ಬಂಧಿಸಿ, ಕಳ್ಳತನಕ್ಕೆ ಬಳಸಿದ ಕಾರು ಸಮೇತ ಎಲ್ಲವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುದೂರು:</strong> ಕೊಯ್ಲಿಗೆ ಬಂದ ಅಡಿಕೆ ಕದಿಯಲು ಶನಿವಾರ ರಾತ್ರಿ ಬಿಸ್ಕೂರು ತೋಟಕ್ಕೆ ನುಗ್ಗಿದ ಮೂವರು ಕಳ್ಳರನ್ನು ಗ್ರಾಮಸ್ಥರು ಹಿಡಿದು ಕುದೂರು ಪೊಲೀಸರಿಗೆ ಒಪ್ಪಿಸಿದ್ದಾರೆ.</p>.<p>ಕಳೆದ ಒಂದು ವಾರದಿಂದ ಬಿಸ್ಕೂರು ಮತ್ತು ಕೋಡಿಹಳ್ಳಿ ಗ್ರಾಮಗಳ ಸುತ್ತಮುತ್ತ ಕೋಯ್ಲಿಗೆ ಬಂದ ಅಡಿಕೆ, ಬಾಳೆಗೋನೆಗಳನ್ನು ರಾತ್ರಿ ವೇಳೆ ಕದಿಯಲಾಗುತ್ತಿತ್ತು. ವಾಹನಗಳಲ್ಲಿ ಬಂದು ಬಾಳೆಗೊನೆ, ಅಡಿಕೆ ಕದಿಯುತ್ತಿದ್ದ ಕಳ್ಳರನ್ನು ಹಿಡಿಯಲು ಗ್ರಾಮಸ್ಥರು ರಾತ್ರಿ ಕಾವಲು ಕಾಯುತ್ತಿದ್ದರು.</p>.<p>ಬಿಸ್ಕೂರು ಕೆರೆ ಏರಿ ಹಿಂಭಾಗದ ಕೋಡಿಹಳ್ಳಿ-ಬಿಸ್ಕೂರು ರಸ್ತೆ ಪಕ್ಕದ ಪದ್ಮನಾಭ ಎಂಬುವರ ತೋಟದಲ್ಲಿ ಗ್ರಾಮಸ್ಥರು ಕಳ್ಳರಿಗಾಗಿ ಹೊಂಚು ಹಾಕಿ ಕುಳಿತಿದ್ದರು. ನಿರೀಕ್ಷೆಯಂತೆ ಶನಿವಾರ ತಡರಾತ್ರಿ ತೋಟಕ್ಕೆ ನುಗ್ಗಿದ ಮೂವರು ಕಳ್ಳರನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದರು.</p>.<p>ಬೆಂಗಳೂರು ನಂಬರ್ ಪ್ಲೇಟ್ ಹೊಂದಿದ (ಕೆಎ 04 ಎಂಜೆಡ್ 0017)ಕಾರಿನಲ್ಲಿ ಬಂದಿದ್ದ ಅಡಿಕೆ ಕಳ್ಳರ ಬಳಿ ಗೋಣಿ ಚೀಲ, ಅಡಿಕೆ ಕೊಯ್ಯುವ ಜವಳಿ ಕೋಲು ಪತ್ತೆಯಾಗಿವೆ. ಮೂವರನ್ನು ಬಂಧಿಸಿ, ಕಳ್ಳತನಕ್ಕೆ ಬಳಸಿದ ಕಾರು ಸಮೇತ ಎಲ್ಲವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>