ಕುದೂರು: ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಟಿ.ದಾಸರಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ಈಚೆಗೆ ನಡೆದ ಮಹಿಳೆಯರ ಮತ್ತು ಪುರುಷರ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ರನ್ನರ್ ಅಪ್ ಪ್ರಶಸ್ತಿ ಪಡೆದಿದ್ದಾರೆ.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಕೃಷ್ಣವೇಣಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಅಗಾಧವಾಗಿ ಅಡಗಿರುತ್ತದೆ. ಹಿಂಜರಿಕೆ ಸ್ವಭಾವದಿಂದ ಹಿಂದೆ ಬೀಳುತ್ತಾರೆ. ಕಠಿಣ ಶ್ರಮ ವಹಿಸಿದರೆ ಯಾವುದೇ ಯಶಸ್ಸು ಸುಲಭವಾಗಿ ಪಡೆಯಬಹುದು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಗುರುಮೂರ್ತಿ ಕೆ.ಎಚ್ ಮಾತನಾಡಿದರು.
ಕಾಲೇಜಿನ ಪ್ರಾಧ್ಯಾಪಕರಾದ ರಾಜಕುಮಾರ್, ಸಿದ್ದೇಶ್ವರ, ರಾಘವೇಂದ್ರ, ದೇವರಾಜ್, ಶಿವರಾಜ್, ತ್ಯಾಗರಾಜ್, ಪುಟ್ಟಲಕ್ಷ್ಮಯ್ಯ, ಜಗದೀಶ್ ಮತ್ತು ಡಾ.ಮುರಳಿ ಕೂಡ್ಲೂರು ಇದ್ದರು.