ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಬಿಡದಿ: ಶಿಥಿಲಾವಸ್ಥೆ ತಲುಪಿದ ಪಾದಚಾರಿ ಮೇಲ್ಸೇತುವೆ

ತುಕ್ಕು ಹಿಡಿದ ಮೆಟ್ಟಿಲು: ನಿರ್ವಹಣೆಗೆ ನಿರ್ಲಕ್ಷ್ಯ ತೋರಿದ ಹೆದ್ದಾರಿ ಪ್ರಾಧಿಕಾರ
Published : 13 ಜೂನ್ 2024, 4:33 IST
Last Updated : 13 ಜೂನ್ 2024, 4:33 IST
ಫಾಲೋ ಮಾಡಿ
Comments
ನಿರ್ವಹಣೆ ಇಲ್ಲದೆ ಬೆಳಗದ ಬೀದಿ ದೀಪ
ನಿರ್ವಹಣೆ ಇಲ್ಲದೆ ಬೆಳಗದ ಬೀದಿ ದೀಪ
ತುಕ್ಕು ಹಿಡಿದಿರುವ ಮೇಲ್ಸೇತುವೆಯ ಮೆಟ್ಟಿಲುಗಳು
ತುಕ್ಕು ಹಿಡಿದಿರುವ ಮೇಲ್ಸೇತುವೆಯ ಮೆಟ್ಟಿಲುಗಳು
ನಿರ್ವಹಣೆ ಇಲ್ಲದೆ ದುರಸ್ತಿಗೆ ಕಾದಿರುವ ಬಿಡದಿಯ ಬೆಂಗಳೂರು–ಮೈಸೂರು ಹೆದ್ದಾರಿಯ ಪಾದಚಾರಿ ಮೇಲ್ಸೇತುವೆ
ನಿರ್ವಹಣೆ ಇಲ್ಲದೆ ದುರಸ್ತಿಗೆ ಕಾದಿರುವ ಬಿಡದಿಯ ಬೆಂಗಳೂರು–ಮೈಸೂರು ಹೆದ್ದಾರಿಯ ಪಾದಚಾರಿ ಮೇಲ್ಸೇತುವೆ
ಮೇಲ್ಸೇತುವೆಯನ್ನು ದುರಸ್ತಿ ಮಾಡಿದರೆ ಬಿಜಿಎಸ್ ವೃತ್ತದ ಸಂಚಾರ ದಟ್ಟಣೆ ತಗ್ಗುವ ಜೊತೆಗೆ ಪಾದಚಾರಿಗಳು ಸುರಕ್ಷಿತವಾಗಿ ರಸ್ತೆ ದಾಟಲು ನೆರವಾಗುತ್ತದೆ. ಸಂಬಂಧಪಟ್ಟವರು ಈ ಕುರಿತು ಗಮನ ಹರಿಸಬೇಕು
– ಸ್ವಾಮಿ ಸ್ಥಳೀಯ ನಿವಾಸಿ ಬಿಡದಿ
ವಯಸ್ಸಾದವರು ಹಾಗೂ ಮಕ್ಕಳಿಗೆ ಮೇಲ್ಸೇತುವೆ ಹತ್ತಿ ಇಳಿಯುವುದು ಕಷ್ಟವಾಗುತ್ತದೆ. ಹಾಗಾಗಿ ಮೇಲ್ಸೇತುವೆ ದುರಸ್ತಿ ಜೊತೆಗೆ ರಸ್ತೆ ದಾಟಲು ಅನುಕೂಲವಾಗುವಂತೆ ರಸ್ತೆಯುಬ್ಬು (ಹಂಪ್ಸ್) ನಿರ್ಮಿಸಿ ಸಿಗ್ನಲ್ ಅಳವಡಿಸಬೇಕು
– ವಿಶ್ವನಾಥ ಸ್ಥಳೀಯ ನಿವಾಸಿ
‘ಕುಡುಕರ ತಾಣವಾಗಿದೆ’
‘ನಿರ್ವಹಣೆ ಇಲ್ಲದ ಮೇಲ್ಸೇತುವೆಯು ಮದ್ಯವ್ಯಸನಿಗಳ ತಾಣವಾಗಿದೆ. ಜನ ಓಡಾಡದಿರುವುದರಿಂದ ರಾತ್ರಿಯಾದರೆ ಕೆಲ ಪುಂಡರು ಇಲ್ಲಿಗೆ ಬಂದು ಮದ್ಯಪಾನ ಧೂಮಪಾನ ಮಾಡುವುದು ಸಾಮಾನ್ಯವಾಗಿದೆ. ಮೇಲ್ಸೇತುವೆ ಮೇಲೆ ಹೋಗಿ ನೋಡಿದರೆ ಮದ್ಯದ ಬಾಟಲಿಗಳು ಸಿಗರೇಟ್ ಪ್ಯಾಕ್‌ಗಳು ಆಹಾರದ ಪೊಟ್ಟಣದ ಕವರ್‌ಗಳು ಬಿದ್ದಿದ್ದು ಮೇಲ್ಭಾಗ ಗಲೀಜಾಗಿದೆ. ಇದರಿಂದಾಗಿ ಅಲ್ಲಿ ಓಡಾಡುವುದನ್ನೇ ಕಡಿಮೆ ಮಾಡಿದ್ದಾರೆ’ ಎಂದು ಸ್ಥಳೀಯ ಅಂಗಡಿ ಮಾಲೀಕ ಸುರೇಶ್ ಸಮಸ್ಯೆಗಳನ್ನು ಬಿಚ್ಚಿಟ್ಟರು. ‘ಮೇಲ್ಸೇತುವೆ ಬಳಕೆಗೆ ಅನುಪಯುಕ್ತವಾಗತೊಡಗಿದಂತೆ ಅದರ ಎರಡೂ ಕಡೆಯ ಮೆಟ್ಟಿಲುಗಳ ಬಳಿ ಬೀದಿ ವ್ಯಾಪಾರಿಗಳು ತಳ್ಳುವ ಗಾಡಿಗಳನ್ನು ಮತ್ತು ಕೆಲವರು ತಮ್ಮ ವಾಹನಗಳನ್ನು ಅಡ್ಡಲಾಗಿ ತಂದು ನಿಲ್ಲಿಸತೊಡಗಿದ್ದಾರೆ. ಮೇಲ್ಸೇತುವೆ ಸೇರಿದಂತೆ ಬಿಜಿಎಸ್ ವೃತ್ತದ ಪಾದಚಾರಿ ಮಾರ್ಗವು ಒಂದು ರೀತಿಯಲ್ಲಿ ಪಾರ್ಕಿಂಗ್ ತಾಣವಾಗಿದೆ’ ಎಂದು ಹೇಳಿದರು.
‘ದುರಸ್ತಿಗೆ ಪ್ರಸ್ತಾವ ಕಳಿಸಿದ್ದೇವೆ’
‘ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತವು (ಕೆಆರ್‌ಡಿಸಿಎಲ್) ಈ ಮೇಲ್ಸೇತುವೆಯನ್ನು ನಿರ್ಮಿಸಿದೆ. ಆರಂಭದಲ್ಲಿ ನಿಗಮದವರು ಮತ್ತು ನಂತರ ಸ್ಥಳೀಯ ಆಡಳಿತ ನಿರ್ವಹಣೆ ಮಾಡುತ್ತಿತ್ತು. ನಂತರ ಅವರು ಸುಮ್ಮನಾಗಿದ್ದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಅದರ ಹೊಣೆ ಹೊತ್ತುಕೊಂಡಿತು. ಸದ್ಯ ಮೇಲ್ಸೇತುವೆ ದುರಸ್ತಿಗೆ ಪ್ರಸ್ತಾವ ಸಿದ್ಧಪಡಿಸಿ ಮೇಲಧಿಕಾರಿಗಳಿಗೆ ಕಳಿಸಿ ಕೊಡಲಾಗಿದೆ. ಮಳೆಗೆ ನೆನೆಯದಂತೆ ಶೆಲ್ಟರ್ ನಿರ್ಮಾಣ ತುಕ್ಕು ಹಿಡಿದಿರುವೆಡೆ ವೆಲ್ಡಿಂಗ್ ಅಗತ್ಯ ಇರುವೆಡೆ ಕಬ್ಬಿಣದ ಪ್ಲೇಟ್ ಅಳವಡಿಕೆ ಹಾಗೂ ಪೇಂಟಿಂಗ್ ಮಾಡಲಾಗುವುದು’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಾಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT