<p><strong>ರಾಮನಗರ:</strong> ಇದೇ 5ರಂದು ನಡೆದ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 12 ಕ್ಷೇತ್ರದಲ್ಲಿ ಗೆಲ್ಲಲಿದೆ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು.</p>.<p>ಮಾಗಡಿ ತಾಲ್ಲೂಕಿನ ಮರಡಿಗುಟ್ಟೆಯಲ್ಲಿ ಶನಿವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು ‘ಅಧಿಕಾರ ಎನ್ನುವುದಕ್ಕಿಂತ ಪಕ್ಷವನ್ನು ಪ್ರೀತಿಸಬೇಕು. ಪಡೆದುಕೊಳ್ಳುವ ಜೊತೆಗೆ ತ್ಯಾಗಕ್ಕೂ ಸಿದ್ಧವಿರಬೇಕು. ಶರತ್ ಬಚ್ಚೇಗೌಡ ಚುನಾವಣೆಗೆ ನಿಲ್ಲಬಾರದಿತ್ತು’ಎಂದು ಅಭಿಪ್ರಾಯಪಟ್ಟರು.</p>.<p>ಜಿಲ್ಲೆಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ ಎಂದು ಡಿ.ಕೆ. ಸುರೇಶ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು ‘ತಾವು ತಂದು ಹಾಕಿದ ಅಧಿಕಾರಿಗಳನ್ನು ಈಗ ತಾವೇ ಬೈಯುತ್ತಿದ್ದಾರೆ. ಡಿ.9 ಕಳೆಯಲಿ. ನಂತರ ಜಿಲ್ಲೆಯಲ್ಲಿ ‘ಕ್ಲೀನಿಂಗ್’ ಆರಂಭಿಸುತ್ತೇನೆ. ದಲ್ಲಾಳಿ ರಹಿತ ವ್ಯವಸ್ಥೆ ತರಲು ನಮ್ಮ ಸರ್ಕಾರ ಬದ್ಧವಾಗಿದೆ. ಅದು ಮುಂದೆ ಜನರಿಗೆ ಗೊತ್ತಾಗುವಂತೆ ಕಾರ್ಯ ನಿರ್ವಹಿಸುತ್ತೇವೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ:</strong> ಇದೇ 5ರಂದು ನಡೆದ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 12 ಕ್ಷೇತ್ರದಲ್ಲಿ ಗೆಲ್ಲಲಿದೆ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು.</p>.<p>ಮಾಗಡಿ ತಾಲ್ಲೂಕಿನ ಮರಡಿಗುಟ್ಟೆಯಲ್ಲಿ ಶನಿವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು ‘ಅಧಿಕಾರ ಎನ್ನುವುದಕ್ಕಿಂತ ಪಕ್ಷವನ್ನು ಪ್ರೀತಿಸಬೇಕು. ಪಡೆದುಕೊಳ್ಳುವ ಜೊತೆಗೆ ತ್ಯಾಗಕ್ಕೂ ಸಿದ್ಧವಿರಬೇಕು. ಶರತ್ ಬಚ್ಚೇಗೌಡ ಚುನಾವಣೆಗೆ ನಿಲ್ಲಬಾರದಿತ್ತು’ಎಂದು ಅಭಿಪ್ರಾಯಪಟ್ಟರು.</p>.<p>ಜಿಲ್ಲೆಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ ಎಂದು ಡಿ.ಕೆ. ಸುರೇಶ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು ‘ತಾವು ತಂದು ಹಾಕಿದ ಅಧಿಕಾರಿಗಳನ್ನು ಈಗ ತಾವೇ ಬೈಯುತ್ತಿದ್ದಾರೆ. ಡಿ.9 ಕಳೆಯಲಿ. ನಂತರ ಜಿಲ್ಲೆಯಲ್ಲಿ ‘ಕ್ಲೀನಿಂಗ್’ ಆರಂಭಿಸುತ್ತೇನೆ. ದಲ್ಲಾಳಿ ರಹಿತ ವ್ಯವಸ್ಥೆ ತರಲು ನಮ್ಮ ಸರ್ಕಾರ ಬದ್ಧವಾಗಿದೆ. ಅದು ಮುಂದೆ ಜನರಿಗೆ ಗೊತ್ತಾಗುವಂತೆ ಕಾರ್ಯ ನಿರ್ವಹಿಸುತ್ತೇವೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>