ಕನಕಪುರ: ಒಂಟಿ ಮಹಿಳೆಯನ್ನು ಗುರಿಯಾಗಿಸಿಕೊಂಡು ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ಸೋಮವಾರ ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ಕಸಬಾ ಹೋಬಳಿ ಜವನಮ್ಮನದೊಡ್ಡಿ ಗ್ರಾಮದಲ್ಲಿ 13 ದಿನಗಳ ಹಿಂದೆ ಪದ್ಮಮ್ಮ ಅವರ 50 ಗ್ರಾಂ ತೂಕದ ಮಾಂಗಲ್ಯ ಸರವನ್ನುಆರೋಪಿಗಳು ಕಿತ್ತುಕೊಂಡು ಪರಾರಿಯಾಗಿದ್ದರು.
ವಿರೂಪಸಂದ್ರ ಗ್ರಾಮದ ಧನಂಜಯ ಅಲಿಯಾಸ್ ಮಂಜ (25) ಮೊದಲ ಆರೋಪಿಯಾಗಿದ್ದು ಈತನೇ ಕಳ್ಳತನದ ಪ್ರಮುಖ ರೂವಾರಿಯಾಗಿದ್ದಾನೆ. ಈತನ ಸಹಕಾರದಿಂದ ಲಕ್ಷ್ಮೀಪುರ ಗ್ರಾಮದ ಬಸವ (35), ತನ್ನ ಸ್ನೇಹಿತರಾದ ಮೈಸೂರಿನ ನಾಡನಹಳ್ಳಿ ಮನೋಜ (24), ಎರಗನಹಳ್ಳಿ ಪ್ರದೀಪ್ (24) ಸರಗಳ್ಳತನ ಮಾಡಿದ್ದು, ಇವರನ್ನು ಬಂಧಿಸಲಾಗಿದೆ.