<p><strong>ಚನ್ನಪಟ್ಟಣ</strong>: ರೈತ ಹಾಗೂ ಕವಿ ಸಮಾಜದ ಎರಡು ಕಣ್ಣುಗಳಿದ್ದಂತೆ. ರೈತ ಸುಗ್ಗಿ ಹಬ್ಬ ಸಂಕ್ರಾಂತಿ ಮಾಡಿದರೆ, ಕವಿ ಕಾವ್ಯದ ಮೂಲಕ ಸಾಮಾಜಿಕ ಕ್ರಾಂತಿ ಮಾಡುತ್ತಾನೆ ಎಂದು ಜಾನಪದ ವಿದ್ವಾಂಸ ಚಕ್ಕೆರೆ ಶಿವಶಂಕರ್ ಅಭಿಪ್ರಾಯಪಟ್ಟರು.</p>.<p>ತಾಲ್ಲೂಕಿನ ವಂದಾರಗುಪ್ಪೆಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಕಸಾಪದಿಂದ ಬುಧವಾರ ನಡೆದ ಸಂಕ್ರಾಂತಿ ಕವಿಗೋಷ್ಠಿ ಹಾಗೂ ಗೀತಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಕಾವ್ಯವೆಂಬುದು ಸೃಜನಶೀಲ ಪ್ರಕ್ರಿಯೆ. ಕಾವ್ಯವೆಂಬುದು ಸಾಧಾರಣವಾದುದಲ್ಲ. ಭಾವನೆಗಳನ್ನು ಹೊರಹರಿಸುವುದಕ್ಕೆ ಭಾಷೆಯ ಮುಖಾಂತರ ರೂಪ ಕೊಡುವುದು ಕಾವ್ಯ. ಕವಿ ಸಾಮಾಜಿಕ ಹೊಣೆಗಾರಿಕೆಯನ್ನು ಹೊತ್ತಿರಬೇಕು ಎಂದರು.</p>.<p>ದೀರ್ಘವಾದ ಕತ್ತಲೆಯಿಂದ ಸುದೀರ್ಘವಾದ ಬೆಳಕಿನೆಡೆಗೆ ಸಾಗುವುದೇ ಸಂಕ್ರಾಂತಿ. ಸಂಕ್ರಾಂತಿಯ ನಿಜವಾದ ಅರ್ಥ ಮನುಷ್ಯನನ್ನು ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದೊಯ್ಯುವುದು. ಸಮ್ಮಿಲನ, ಸ್ನೇಹ, ಸೌಹಾರ್ದ, ಭಾವೈಕ್ಯ ಸಾರುವುದೇ ಸಂಕ್ರಾಂತಿ ಎಂದರು.</p>.<p>ವಂದಾರಗುಪ್ಪೆ ವಿಎಸ್ಎಸ್ಎನ್ ಅಧ್ಯಕ್ಷ ವಿ.ಬಿ. ಚಂದ್ರು ಮಾತನಾಡಿ, ಅಂಧಕಾರದಲ್ಲಿರುವ ಸಮಾಜಕ್ಕೆ ಕವಿಗಳು ಕಾವ್ಯಗಳ ಮೂಲಕ ಕಣ್ಣು ತೆರೆಸಬೇಕಿದೆ ಎಂದು ಹೇಳಿದರು.</p>.<p>ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ. ನಾಗೇಶ್ ಮಾತನಾಡಿ, ಯುವ ಸಮುದಾಯ ಸ್ವಾರ್ಥಕ್ಕಾಗಿ ಕವಿತೆಗಳನ್ನು ರಚಿಸಿದೆ ಸಮಾಜದ ಹಿತಕ್ಕಾಗಿ ಕವಿತೆಗಳನ್ನು ಬರೆಯಬೇಕಿದೆ ಎಂದರು.</p>.<p>ವಿಎಸ್ಎಸ್ಎನ್ ನಿರ್ದೇಶಕ ರಾಂಪುರ ರಾಜಣ್ಣ, ಗ್ರಾ.ಪಂ. ಸದಸ್ಯ ಎಸ್.ಪ್ರಭಾಕರ್, ಎಂಪಿಸಿಎಸ್ ಅಧ್ಯಕ್ಷ ಎನ್.ರಾಜೇಶ್, ತಾಲ್ಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ ರಾಂಪುರ, ನಿವೃತ್ತ ಅಧ್ಯಾಪಕ ಚನ್ನವೀರೇಗೌಡ, ಜಿಲ್ಲಾ ಸಂಚಾಲಕ ಚಕ್ಕೆರೆ ಪುಟ್ಟಸ್ವಾಮಿ, ವೀಣಾ ಇದ್ದರು.</p>.<p>ಬಿ.ಚಲುವರಾಜು, ಕೂ.ಗಿ.ಗಿರಿಯಪ್ಪ, ಕೂರಣಗೆರೆ ಕೃಷ್ಣಪ್ಪ, ಮಂಜೇಶ್ ಬಾಬು, ಎಂ.ಶ್ರೀನಿವಾಸ್, ಡಾ.ಹೇಮಂತ್ ಕುಮಾರ್, ಬಸವರಾಜು ಅರಳಾಪುರ ಕವಿತೆ ವಾಚಿಸಿದರು. ಗಾಯಕರಾದ ಗೋವಿಂದಹಳ್ಳಿ ಶಿವಣ್ಣ, ಕೆಂಗಲ್ ವಿನಯ್ ಕುಮಾರ್, ರಾಮಕೃಷ್ಣಯ್ಯ ಬ್ರಹ್ಮಣೀಪುರ ಗೀತಗಾಯನ ನಡೆಸಿಕೊಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಪಟ್ಟಣ</strong>: ರೈತ ಹಾಗೂ ಕವಿ ಸಮಾಜದ ಎರಡು ಕಣ್ಣುಗಳಿದ್ದಂತೆ. ರೈತ ಸುಗ್ಗಿ ಹಬ್ಬ ಸಂಕ್ರಾಂತಿ ಮಾಡಿದರೆ, ಕವಿ ಕಾವ್ಯದ ಮೂಲಕ ಸಾಮಾಜಿಕ ಕ್ರಾಂತಿ ಮಾಡುತ್ತಾನೆ ಎಂದು ಜಾನಪದ ವಿದ್ವಾಂಸ ಚಕ್ಕೆರೆ ಶಿವಶಂಕರ್ ಅಭಿಪ್ರಾಯಪಟ್ಟರು.</p>.<p>ತಾಲ್ಲೂಕಿನ ವಂದಾರಗುಪ್ಪೆಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಕಸಾಪದಿಂದ ಬುಧವಾರ ನಡೆದ ಸಂಕ್ರಾಂತಿ ಕವಿಗೋಷ್ಠಿ ಹಾಗೂ ಗೀತಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಕಾವ್ಯವೆಂಬುದು ಸೃಜನಶೀಲ ಪ್ರಕ್ರಿಯೆ. ಕಾವ್ಯವೆಂಬುದು ಸಾಧಾರಣವಾದುದಲ್ಲ. ಭಾವನೆಗಳನ್ನು ಹೊರಹರಿಸುವುದಕ್ಕೆ ಭಾಷೆಯ ಮುಖಾಂತರ ರೂಪ ಕೊಡುವುದು ಕಾವ್ಯ. ಕವಿ ಸಾಮಾಜಿಕ ಹೊಣೆಗಾರಿಕೆಯನ್ನು ಹೊತ್ತಿರಬೇಕು ಎಂದರು.</p>.<p>ದೀರ್ಘವಾದ ಕತ್ತಲೆಯಿಂದ ಸುದೀರ್ಘವಾದ ಬೆಳಕಿನೆಡೆಗೆ ಸಾಗುವುದೇ ಸಂಕ್ರಾಂತಿ. ಸಂಕ್ರಾಂತಿಯ ನಿಜವಾದ ಅರ್ಥ ಮನುಷ್ಯನನ್ನು ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದೊಯ್ಯುವುದು. ಸಮ್ಮಿಲನ, ಸ್ನೇಹ, ಸೌಹಾರ್ದ, ಭಾವೈಕ್ಯ ಸಾರುವುದೇ ಸಂಕ್ರಾಂತಿ ಎಂದರು.</p>.<p>ವಂದಾರಗುಪ್ಪೆ ವಿಎಸ್ಎಸ್ಎನ್ ಅಧ್ಯಕ್ಷ ವಿ.ಬಿ. ಚಂದ್ರು ಮಾತನಾಡಿ, ಅಂಧಕಾರದಲ್ಲಿರುವ ಸಮಾಜಕ್ಕೆ ಕವಿಗಳು ಕಾವ್ಯಗಳ ಮೂಲಕ ಕಣ್ಣು ತೆರೆಸಬೇಕಿದೆ ಎಂದು ಹೇಳಿದರು.</p>.<p>ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ. ನಾಗೇಶ್ ಮಾತನಾಡಿ, ಯುವ ಸಮುದಾಯ ಸ್ವಾರ್ಥಕ್ಕಾಗಿ ಕವಿತೆಗಳನ್ನು ರಚಿಸಿದೆ ಸಮಾಜದ ಹಿತಕ್ಕಾಗಿ ಕವಿತೆಗಳನ್ನು ಬರೆಯಬೇಕಿದೆ ಎಂದರು.</p>.<p>ವಿಎಸ್ಎಸ್ಎನ್ ನಿರ್ದೇಶಕ ರಾಂಪುರ ರಾಜಣ್ಣ, ಗ್ರಾ.ಪಂ. ಸದಸ್ಯ ಎಸ್.ಪ್ರಭಾಕರ್, ಎಂಪಿಸಿಎಸ್ ಅಧ್ಯಕ್ಷ ಎನ್.ರಾಜೇಶ್, ತಾಲ್ಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ ರಾಂಪುರ, ನಿವೃತ್ತ ಅಧ್ಯಾಪಕ ಚನ್ನವೀರೇಗೌಡ, ಜಿಲ್ಲಾ ಸಂಚಾಲಕ ಚಕ್ಕೆರೆ ಪುಟ್ಟಸ್ವಾಮಿ, ವೀಣಾ ಇದ್ದರು.</p>.<p>ಬಿ.ಚಲುವರಾಜು, ಕೂ.ಗಿ.ಗಿರಿಯಪ್ಪ, ಕೂರಣಗೆರೆ ಕೃಷ್ಣಪ್ಪ, ಮಂಜೇಶ್ ಬಾಬು, ಎಂ.ಶ್ರೀನಿವಾಸ್, ಡಾ.ಹೇಮಂತ್ ಕುಮಾರ್, ಬಸವರಾಜು ಅರಳಾಪುರ ಕವಿತೆ ವಾಚಿಸಿದರು. ಗಾಯಕರಾದ ಗೋವಿಂದಹಳ್ಳಿ ಶಿವಣ್ಣ, ಕೆಂಗಲ್ ವಿನಯ್ ಕುಮಾರ್, ರಾಮಕೃಷ್ಣಯ್ಯ ಬ್ರಹ್ಮಣೀಪುರ ಗೀತಗಾಯನ ನಡೆಸಿಕೊಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>