ಶೆಟ್ಟಿಹಳ್ಳಿ ಕೆರೆಗೆ ಹೊಂದಿಕೊಂಡಂತಿರುವ ಇಂದಿರಾ ಕಾಟೇಜ್ ಭಾಗದಲ್ಲಿ ಕೆರೆ ಒತ್ತುವರಿಯಾಗಿರುವುದು
ಕೆರೆಗೆ ಹಳೆಯ ಕಟ್ಟಡಗಳ ಅವಶೇಷವನ್ನು ತಂದು ಸುರಿದಿರುವುದು
ರಾಘವೇಂದ್ರ ಬಡಾವಣೆ ಭಾಗದಲ್ಲಿ ಕೆರೆ ಒತ್ತುವರಿ ಮಾಡಿ ಗಿಡವೊಂದನ್ನು ನೆಟ್ಟಿರುವುದು
ಪೊಲೀಸ್ ವಸತಿ ನಿಲಯದ ಬಳಿ ಮಂಗಳಮುಖಿಯರು ಕೆರೆ ಮುಚ್ಚಿ ದೇವಸ್ಥಾನ ನಿರ್ಮಿಸಿರುವುದು

ಶೆಟ್ಟಿಹಳ್ಳಿ ಕೆರೆ ಒತ್ತುವರಿಯ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು. ಈಗಾಗಲೇ ಕೆಲವೆಡೆ ಆಗಿರುವ ಒತ್ತುವರಿ ತೆರವು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ತೆರವು ಕಾರ್ಯಾಚರಣೆ ನಡೆಸಿ ಕೆರೆ ಜಾಗವನ್ನು ಬಂದೋಬಸ್ತ್ ಮಾಡಲಾಗುವುದು.
ಲಕ್ಷ್ಮಿದೇವಮ್ಮ ಗ್ರೇಡ್ 2 ತಹಶೀಲ್ದಾರ್ ಚನ್ನಪಟ್ಟಣ
ಶೆಟ್ಟಿಹಳ್ಳಿ ಕೆರೆಯು ಐತಿಹಾಸಿಕ ಕೆರೆಯಾಗಿದ್ದು ಈ ಕೆರೆಯನ್ನು ಉಳಿಸುವ ನಿಟ್ಟಿನಲ್ಲಿ ಕೆರೆ ಒತ್ತುವರಿ ತೆರವುಗೊಳಿಸಿ ಪುನಶ್ಚೇತನಗೊಳಿಸಿ ಶುದ್ಧನೀರು ತುಂಬಿಸಿ ಜಲಕ್ರೀಡೆ ದೋಣಿ ವಿಹಾರಕ್ಕೆ ಯೋಜನೆ ರೂಪಿಸುವುದು ಉತ್ತಮ. ಇದರಿಂದ ನಗರ ವಾಸಿಗಳು ತಮ್ಮ ರಜಾ ದಿನಗಳಲ್ಲಿ ಈ ಕೆರೆಯನ್ನು ಮೋಜಿನ ತಾಣವಾಗಿ ಬಳಸಿಕೊಳ್ಳಲು ಅನುಕೂಲವಾಗುತ್ತದೆ. ಸಂಬಂಧಪಟ್ಟವರು ಈ ಬಗ್ಗೆ ಚಿಂತಿಸುವುದು ಅಗತ್ಯ
ಸುರೇಶ್ ಕುಮಾರ್ ಉಪನ್ಯಾಸಕ ಚನ್ನಪಟ್ಟಣ