ಮುಖಂಡ ಶ್ರೀಪತಿಹಳ್ಳಿ ಕೃಷ್ಣಪ್ಪ ಮಾತನಾಡಿ, ಕುಡಿಯುವ ನೀರಿಲ್ಲದೆ ಯುವಕರಿಗೆ ಹೆಣ್ಣು ಕೊಡಲು ಹಿಂಜರಿಯುತ್ತಿದ್ದ ಕಾಲದಲ್ಲಿ ಸಚಿವರಾಗಿದ್ದ ರೇವಣ್ಣ ಮಂಚನಬೆಲೆ ಜಲಾಶಯದ ನೀರನ್ನು ಪಟ್ಟಣಕ್ಕೆ ಒದಗಿಸಿದರು. ಬೆಂಗಳೂರು–ಮಾಗಡಿ ರಸ್ತೆ
ನಿರ್ಮಾಣ, ಅಂಗನವಾಡಿ ಕೇಂದ್ರಗಳು, ವಸತಿರಹಿತರಿಗೆ ಮನೆಗಳನ್ನು ಕಟ್ಟಿಸಿ ಕೊಡುವ ಮೂಲಕ ತಾಲ್ಲೂಕಿನ ಕೆರೆಗಳಿಗೆ ಹೇಮಾವತಿ ನದಿ ನೀರು ಹರಿಸುವ ಯೋಜನೆಗೆ ಚಾಲನೆ ನೀಡಿದರು ಎಂದು
ಹೇಳಿದರು.