ಯೇಸು ಪ್ರತಿಮೆ ನಿರ್ಮಾಣ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಈ ನಡುವೆ ಕೆಲವರು ವೈಯಕ್ತಿಕ ನಿಂದನೆಗಳಿಗೂ ಮುಂದಾಗಿದ್ದಾರೆ. ಬಿಜೆಪಿಯ ಕೆಲವು ಸಂಸದರು, ಶಾಸಕರಿಂದಲೇ ಧರ್ಮ ಪ್ರಚೋದನೆಯ ಟೀಕೆಗಳು ಬರುತ್ತಿವೆ. ಅವರ ಹಿಂಬಾಲಕರೂ ಡಿಕೆಶಿ ಅವರ ಕಾಲೆಳೆಯತೊಡಗಿದ್ದಾರೆ. ಶಿವಕುಮಾರ್ರನ್ನು ‘ಯೇಸುಕುಮಾರ್’ ಎಂದೆಲ್ಲ ಬರೆಯಲಾಗಿದೆ.